ಸೋಂಕಿತರ ಸಂಖ್ಯೆ ಹೆಚ್ಚಿದ್ರೂ ಎಚ್ಚತ್ತುಕೊಳ್ತಿಲ್ಲ, ಮಾರ್ಕೆಟ್ಗಳಲ್ಲಿ ಜನ ಜಾತ್ರೆ..!
ಮೈಸೂರಿನಲ್ಲಿ ಕೊರೋನಾ ಸೋಂಕಿನ ಬಗ್ಗೆ ಜನ ಇನ್ನೂ ಎಚ್ಚೆತ್ತುಕೊಂಡಿಲ್ಲ. ಅಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ ಜನ ಮಾತ್ರ ಗುಂಪು ಗುಂಪಾಗಿ ಓಡಾಡುತ್ತಲೇ ಇದ್ದಾರೆ.
ಮೈಸೂರು(ಏ.09): ಮೈಸೂರಿನಲ್ಲಿ ಕೊರೋನಾ ಸೋಂಕಿನ ಬಗ್ಗೆ ಜನ ಇನ್ನೂ ಎಚ್ಚೆತ್ತುಕೊಂಡಿಲ್ಲ. ಅಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ ಜನ ಮಾತ್ರ ಗುಂಪು ಗುಂಪಾಗಿ ಓಡಾಡುತ್ತಲೇ ಇದ್ದಾರೆ.
ಲಲಿತಾದ್ರಿಪುರದಲ್ಲಿ ಜನ ಭಾರೀ ಸಂಖ್ಯೆಯಲ್ಲಿ ಕೂಡುತ್ತಿದ್ದು, ಪೊಲೀಸರು ಲಾಠಿ ಹಿಡಿದು ಹೆದರಿಸಿದರೂ ಜನ ಮಾತ್ರ ಮನೆ ಕಡೆ ತೆರಳುತ್ತಿಲ್ಲ. ಸಾರ್ವಜನಿಕ ಪ್ರದೇಶದಲ್ಲಿ ಗುಂಪು ಗುಂಪಾಗಿ ಓಡಾಡುತ್ತಿದ್ದು ಅಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದರೂ ಜನ ಎಚ್ಚೆತ್ತುಕೊಳ್ಳದಿರುವುದು ವಿಪರ್ಯಾಸ.
ತರಕಾರಿ, ದಿನಸಿ ಖರೀದಿಗೆ ಬೇಕಾಬಿಟ್ಟಿ ಓಡಾಡುತ್ತಿದ್ದು, ಮಾಸ್ಕ್ ಸ್ಯಾನಿಟೈಸರ್ಗಳನ್ನೂ ಬಳಸುತ್ತಿಲ್ಲ. ಕೊರೋನಾ ಭೀತಿ ಹೆಚ್ಚುತ್ತಿದ್ದರೂ ಜನ ಮಾತ್ರ ಜಾತ್ರೆಗೆ ಬಂದಂತೆ ಬಂದು ಸೇರುತ್ತಿದ್ದಾರೆ.