ವೀಕೆಂಡ್ ಕರ್ಫ್ಯೂ ವೇಳೆಯೂ ಜನರ ಬಿಂದಾಸ್ ಓಡಾಟ..!
* ವೀಕೆಂಡ್ ಕರ್ಫ್ಯೂ ವೇಳೆಯೂ ಕೆಎಸ್ಆರ್ಟಿಸಿ ಬಸ್ ಸಂಚಾರ
* ದಿನ 24 ಗಂಟೆಯೂ ಸಾರಿಗೆ ಸಂಚಾರಕ್ಕೆ ಅನುಮತಿ
* ಬೇಕಾಬಿಟ್ಟಿ ಓಡಾಡಿದರೆ ವಾಹನ ಸೀಜ್
ಬೆಂಗಳೂರು(ಜೂ.26): ರಾಜ್ಯಾದ್ಯಂತ ಇಂದು ಮತ್ತು ನಾಳೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ಕರ್ಫ್ಯೂ ವೇಳೆಯೂ ಜನರು ಬಿಂದಾಸ್ ಅಗಿ ಓಡಾಡುತ್ತಿದ್ದಾರೆ. ಅಗತ್ಯ ವಸ್ತುಗಳ ಖರೀದಿಯಲ್ಲಿ ಮಾರುಕಟ್ಟೆಯಲ್ಲಿ ಜನರು ಫುಲ್ ಬ್ಯೂಸಿಯಾಗಿದ್ದಾರೆ. ವೀಕೆಂಡ್ ಕರ್ಫ್ಯೂ ವೇಳೆಯೂ ಕೆಎಸ್ಆರ್ಟಿಸಿ ಬಸ್ ಸಂಚಾರ ಇದೆ. ದಿನ 24 ಗಂಟೆಯೂ ಸಾರಿಗೆ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆದರೆ ಬೇಕಾಬಿಟ್ಟಿ ಓಡಾಡಿದರೆ ವಾಹನಗಳನ್ನ ಸೀಜ್ ಮಾಡಲಾಗುತ್ತದೆ.