Asianet Suvarna News Asianet Suvarna News

'ರೇಪ್ ಮಾಡುವಂತವರಿಗೆ ಏನ್ ಕಟ್ ಮಾಡಬಹುದೋ ಅದನ್ನು ಕಟ್ ಮಾಡಬೇಕು'

* ಮೈಸೂರು ಪ್ರಕರಣದ ಬಗ್ಗೆ ಸಚಿವ ಆನಂದ್ ಸಿಂಗ್ ಪ್ರತಿಕ್ರಿಯೆ
* ಅತ್ಯಾಚಾರಿಗಳಿಗೆ ಏನು ಕಟ್ ಮಾಡಲಾಗುತ್ತದೆಯೋ ಅದನ್ನು ಕಟ್ ಮಾಡಬೇಕು
* ದುಬೈ ಮಾದರಿಯ ಕಾನೂನು ನಮ್ಮಲ್ಲಿ ಬರಬೇಕು 

ಬೆಂಗಳೂರು(ಆ. 27)  ಮೈಸೂರು ಪ್ರಕರಣದ ಬಗ್ಗೆ ಸಚಿವ ಆನಂದ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಇಂಥ ಘೋರ ಘಟನೆ ನಡೆಯಬಾರದು. ನಮ್ಮಲ್ಲಿಯೂ ದುಬೈ ಮಾದರಿ ಕಾನೂನು ಬರಬೇಕು. ಇಂಥವರಿಗೆ ಕಟ್ಟ ಮಾಡುವ ಶಿಕ್ಷೆ ನೀಡಬೇಕು. ಆದರೆ ಪ್ರಜಾಪ್ರಭುತ್ವದಲ್ಲಿ ಅದು ಸಾಧ್ಯವಿಲ್ಲ ಎಂದಿದ್ದಾರೆ.

ನಾವು ಮಧ್ಯರಾತ್ರಿ  ಓಡಾಡೋದಿಲ್ವ

ಇಂಥದ್ದನ್ನು ಮಾಡುವವರಿಗೆ ಏನೇನನ್ನೂ ಕಟ್ ಮಾಡಬಹುದೋ ಅದನ್ನು ಕಟ್ ಮಾಡಬೇಕು ಎಂದಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ  ಪೊಲೀಸ್ ಇಲಾಖೆ ತನಿಖೆ ಮಾಡುತ್ತಿದೆ ಎಂದು ತಿಳಿಸಿದ್ದಾರೆ. ಮೈಸೂರಿನ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು ಪೊಲೀಸ್ ಇಲಾಖೆ ಮೇಲೆ ಸಾಕಷ್ಟು ದೂರುಗಳು ಬರುತ್ತಿವೆ. 

 

Video Top Stories