Asianet Suvarna News Asianet Suvarna News

ಕೊರೋನಾ ಅಟ್ಟಹಾಸ: 'ಕಲಬುರಗಿ ಜಿಲ್ಲೆಯಲ್ಲಿ ಲಾಕ್‌ಡೌನ್‌ ಸಡಿಲಿಕೆ ಬೇಡ'

ಕಲಬುರಗಿ ಜಿಲ್ಲೆಯಲ್ಲಿ ಸಡಿಲಿಕೆ ಬದಲಿಕೆ ಇನಷ್ಟು ಲಾಕ್‌ಡೌನ್‌ ಬಿಗಿ ಮಾಡಿ: ಸಂಸದ ಡಾ. ಉಮೇಶ್ ಜಾಧವ್‌| ಜನರ ಆರೋಗ್ಯದ ದೃಷ್ಟಿಯಿಂದ ಲಾಕ್‌ಡೌನ್‌ ಸಡಿಲಿಕೆ ಮಾಡುವುದು ಬೇಡ|ಕಟ್ಟುನಿಟ್ಟಿನ ಕ್ರಮ ಅಗತ್ಯತೆ ಇದೆ|

ಕಲಬುರಗಿ(ಮೇ.04): ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಹೀಗಾಗಿ ಜಿಲ್ಲೆಯಲ್ಲಿ ಸಡಿಲಿಕೆ ಬದಲಿಕೆ ಇನಷ್ಟು ಲಾಕ್‌ಡೌನ್‌ ಬಿಗಿ ಮಾಡಿ ಎಂದು ಸಂಸದ ಡಾ. ಉಮೇಶ್ ಜಾಧವ್‌ ಅವರು ಆಗ್ರಹಿಸಿದ್ದಾರೆ. 

ವಲಸೆ ಕಾರ್ಮಿಕರಿಗೆ ಆಸರೆಯಾದ DCP ಶಶಿಕುಮಾರ್

ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಅಗತ್ಯತೆ ಇದೆ, ಜನರ ಆರೋಗ್ಯದ ದೃಷ್ಟಿಯಿಂದ ಲಾಕ್‌ಡೌನ್‌ ಸಡಿಲಿಕೆ ಮಾಡುವುದು ಬೇಡ, ನಿನ್ನೆ(ಭಾನುವಾರ) ಒಂದೇ ದಿನ ಆರು ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿವೆ. ಹೀಗಾಗಿ ಯಾವುದೇ ಕಾರಣಕ್ಕೂ ಲಾಕ್‌ಡೌನ್‌ ಸಡಿಲಿಕೆ ಬೇಡ ಎಂದು ಹೇಳಿದ್ದಾರೆ. 

"

Video Top Stories