Asianet Suvarna News Asianet Suvarna News

ಆರ್‌ಆರ್ ನಗರ ಸಭೆಯಲ್ಲಿ ಸದ್ದು ಮಾಡಿದ ರಾಮನಗರ, ಸುರೇಶ್  VS ಸೋಮಶೇಖರ್

ಆರ್ ಆರ್ ನಗರ ವಲಯ ಸಭೆ ನಂತರ ಸರ್ಕಾರದ ಮೇಲೆ ಡಿಕೆ ಸುರೇಶ್ ವಾಗ್ದಾಳಿ/ ಡಿಕೆ ಸುರೇಶ್ ಮತ್ತು ಸಚಿವರ ನಡುವೆ ಮಾತಿನ ಚಕಮಕಿ/ ಸರ್ಕಾರ ಏನು ಮಾಡುತ್ತಿದೆ ಎಂದ ಸುರೇಶ್/ 

ಬೆಂಗಳೂರು(ಜು. 22)  ಸರ್ಕಾರದ ವಿರುದ್ಧ ಕಾಂಗ್ರೆಸ್ ನ ಏಕೈಕ ಸಂಸದ ವಾಗ್ದಾಳಿ ಮಾಡಿದ್ದಾರೆ. ಆರ್ ಆರ್ ನಗರ ವಲಯದ ಸಭೆ ಬಳಿಕ ಡಿಕೆ ಸುರೇಶ್ ಅಸಮಾಧಾನ ಹೊರಹಾಕಿದ್ದಾರೆ. ಇದಕ್ಕೆ ಸಚಿವ ಎಸ್‌ಟಿ ಸೋಮಶೇಖರ್ ತಿರುಗೇಟು ನೀಡಿದ್ದಾರೆ.

ಬೆಂಗಳೂರು ಅನ್ ಲಾಕ್ ನಂತರ ಸಿಎಂ ಕೊಟ್ಟ ಖಡಕ್ ಎಚ್ಚರಿಕೆ

ಊರೆಲ್ಲ ಕೊಳ್ಳೆ ಹೊಡೆದ ಮೇಲೆ ಈಗ ಬಂದೋಬಸ್ತ್ ಮಾಡಲು ಹೊರಟಿದ್ದಾರೆ ಎಂದು ಸುರೇಶ್ ಆರೋಪಿಸಿದ್ದಾರೆ.  ಸುರೇಶ್ ಆರ್ ಆರ್ ನಗರದ ಝೋನ್ ಬಗ್ಗೆ ಮಾತನಾಡುವ ಬದಲು ರಾಮನಗರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಸೋಮಶೇಖರ್ ಹೇಳಿದ್ದಾರೆ.