Asianet Suvarna News Asianet Suvarna News

ಅಧಿಕಾರಿಗಳನ್ನು ನಿಂದಿಸಿದ ಬಿಜೆಪಿ ಶಾಸಕ; ಬೆಂಡೆತ್ತಿದ ಸಚಿವ ಜಿಟಿಡಿ!

ಮೈಸೂರು ಸಿಟಿ ರೌಂಡ್ಸ್ ವೇಳೆ ಸರ್ಕಾರಿ ಕಟ್ಟಡಕ್ಕೆ ಭೇಟಿ ನೀಡಿದ ಸಚಿವ ಜಿ.ಟಿ. ದೇವೇಗೌಡ ಮತ್ತು ಬಿಜೆಪಿ ಶಾಸಕ ಎಲ್. ನಾಗೇಂದ್ರ, ಕಳಪೆ ನಿರ್ವಹಣೆಯನ್ನು ಕಂಡು ಕೆಂಡಾಮಂಡಲರಾಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಲು ಸಚಿವ ಜಿಟಿಡಿ ಸೂಚಿಸಿದ್ದಾರೆ.

ಮೈಸೂರು (ಜು.03): ಇಂದೋರ್‌ನ ಬಿಜೆಪಿ ಶಾಸಕನೊಬ್ಬ ಅಧಿಕಾರಿಯನ್ನು ಬ್ಯಾಟ್‌ನಿಂದ ಥಳಿಸಿದ ಘಟನೆ ಇನ್ನೂ ಬಿಸಿಬಿಸಿಯಾಗಿರುವಾಗಲೇ, ರಾಜ್ಯದ ಶಾಸಕರೊಬ್ಬರು ಅಧಿಕಾರಿಗಳನ್ನು ನಿಂದಿಸಿದ ಘಟನೆ ನಡೆದಿದೆ.

ಸಿಟಿ ರೌಂಡ್ಸ್ ವೇಳೆ ಸರ್ಕಾರಿ ಕಟ್ಟಡಕ್ಕೆ ಭೇಟಿ ನೀಡಿದ ಸಚಿವ ಜಿ.ಟಿ. ದೇವೇಗೌಡ ಮತ್ತು ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಎಲ್. ನಾಗೇಂದ್ರ, ಕಟ್ಟಡದ ದುಸ್ಥಿತಿಯನ್ನು ಕಂಡು ಅಧಿಕಾರಿಗಳನ್ನು ಬೆಂಡೆತ್ತಿದ್ದಾರೆ. ಕಳಪೆ ನಿರ್ವಹಣೆಯನ್ನು ಕಂಡು ಕೆಂಡಾಮಂಡಲರಾದ ಸಚಿವ ಜಿಟಿಡಿ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಲು ಸೂಚಿಸಿದ್ದಾರೆ.

ಇದೇ ಸಂದರ್ಭದಲ್ಲಿ ನಾಗೇಂದ್ರ, ಅಧಿಕಾರಿಗಳನ್ನು ಕಳ್ಳ ನನ್ ಮಕ್ಳು, ಕೆಲಸ ಮಾಡಲ್ಲ ಎಂದು ನಿಂದಿಸಿದ್ದಾರೆ.   
 

Video Top Stories