Asianet Suvarna News Asianet Suvarna News

ಥರ್ಮಾಕಾಲ್ ಹಿಡಿದುಕಡಲಲ್ಲಿ ಈಜಿದ ವ್ಯಕ್ತಿ: ಬಚಾವಾಗಿದ್ದೆ ಭಾಗ್ಯ

ಮೀನುಗಾರಿಕಾ ದೋಣಿಯಿಂದ ಎಸೆಯಲ್ಪಟ್ಟು ಅರ್ಧ ತಾಸು ಸಮುದ್ರದಲ್ಲಿ ಈಜಿದ ಮೀನುಗಾರ ಅದೃಷ್ಟವಶಾತ್ ಬದುಕುಳಿದಿದ್ದಾನೆ. ಮಂಗಳೂರು ಹೊರವಲಯದ ಉಳ್ಳಾಲ ಅಳಿವೆಬಾಗಿಲು ಆಳಸಮುದ್ರದಲ್ಲಿ ಘಟನೆ ನಡೆದಿದೆ.

ಮಂಗಳೂರು(ಆ.29): ಮೀನುಗಾರಿಕಾ ದೋಣಿಯಿಂದ ಎಸೆಯಲ್ಪಟ್ಟು ಅರ್ಧ ತಾಸು ಸಮುದ್ರದಲ್ಲಿ ಈಜಿದ ಮೀನುಗಾರ ಅದೃಷ್ಟವಶಾತ್ ಬದುಕುಳಿದಿದ್ದಾನೆ. ಮಂಗಳೂರು ಹೊರವಲಯದ ಉಳ್ಳಾಲ ಅಳಿವೆಬಾಗಿಲು ಆಳಸಮುದ್ರದಲ್ಲಿ ಘಟನೆ ನಡೆದಿದೆ.

ಕಸಬ ಬೆಂಗ್ರೆಯ ನಿವಾಸಿ ನವಾಝ್ (35) ಬದುಕುಳಿದ ಮೀನುಗಾರ. ಕಸಬಾ ಬೆಂಗ್ರೆಯ ನಾಡದೋಣಿ ಅಳಿವೆ ಬಾಗಿಲಿನತ್ತ  ದಿರುಗುತ್ತಿದ್ದಾಗ ಸಮುದ್ರದಲ್ಲಿ ಕೆಟ್ಟು ನಿಂತಿತ್ತು. ಈ ಸಂದರ್ಭ ಮೀನಿಗೆ ಹಾಕಿದ್ದ ಬಲೆಯನ್ನು ಎಳೆಯಲು ನವಾಝ್ ಯತ್ನಿಸುತ್ತಿದ್ದರು. ಈ ವೇಳೆ ಭಾರೀ ಗಾತ್ರದ ಅಲೆ ಅಪ್ಪಳಿಸಿ ಸಮುದ್ರ ಪಾಲಾಗಿದ್ದ ನವಾಝ್ ಅರ್ಧತಾಸಿನಷ್ಟು ಕಾಲ ಥರ್ಮಾಕೋಲಿನ ಸಹಾಯದಿಂದ ಈಜಾಡಿದ್ದರು.

ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಂಭ್ರಮದ ಸಿದ್ಧತೆ: ಸಿಂಗಾರಗೊಂಡಿದೆ ಉಡುಪಿ

ಈ ವೇಳೆ ಅದೇ ದಾರಿಯಿಂದ ಮೀನುಗಾರಿಕೆ ಮುಗಿಸಿ ವಾಪಸಾಗುತ್ತಿದ್ದ ಮೀನುಗಾರರಿಂದ ರಕ್ಷಣೆ ನಡೆದಿದೆ. ಪ್ರೇಮ್ ಪ್ರಕಾಶ್, ಸೂರ್ಯಪ್ರಕಾಶ್, ಅನಿಲ್ ಮೊಂತೇರೋ, ಅಜಿತ್ ಬೆಂಗರೆ, ರಿತೀಶ್ ಹೊಯ್ಗೆ ಬಜಾರ್ ನವಾಝ್ ರಕ್ಷಿಸಿದ್ದಾರೆ.