ಸ್ಪೆಷಲ್ ಸೆಲ್ನಲ್ಲಿ ವಿಚಾರಣೆ, ರಾತ್ರಿ ಪೂರಾ ನಿದ್ರೇನೇ ಮಾಡಿಲ್ಲ ಆದಿತ್ಯ ರಾವ್
ಸ್ಪೆಷಲ್ ಸೆಲ್ನಲ್ಲಿ ಬಾಂಬರ್ ಆದಿತ್ಯ ರಾವ್ನನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಹೆಚ್ಚಿನ ಭದ್ರತೆಗೆ ಪೊಲೀಸರನ್ನು ನಿಯೋಜಿಸಿ ಘಟನೆಯ ಬಗ್ಗೆ ತೀವ್ರ ವಿಚಾರಣೆ ನಡೆಸಲಾಗಿದೆ.
ಮಂಗಳೂರು(ಜ.23): ಸ್ಪೆಷಲ್ ಸೆಲ್ನಲ್ಲಿ ಬಾಂಬರ್ ಆದಿತ್ಯಾ ರಾವ್ನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಘಟನೆ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ ಆರೋಪಿ ಆದಿತ್ಯ ಸೆಲ್ಗೆ ಇಬ್ಬರು ಪಿಎಸ್ಐ, 10 ಪಿಸಿಗಳಿಂದ ಭದ್ರತೆ ನೀಡಲಾಗಿದೆ.
ಮುಲ್ಕಿ ಪಿಎಸ್ಐ ಶೀತಲ್ ಕುಮಾರ್, ಬಜ್ಪೆ ಪಿಎಸ್ಐ ಪುನೀತ್ ಕುಮಾರ್ ವಿಚಾರಣೆ ನಡೆಸಿದ್ದಾರೆ. ರಾತ್ರಿ ವಿಚಾರಣೆ ನಡೆಇದ ನಂತರವೂ ಆದಿತ್ಯ ನಿದ್ರಿಸಿರಲಿಲ್ಲ. ನಡು ನಡುವೆ ಎದ್ದು ಮತ್ತೆ ಮಲಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪಣಂಬೂರ್ ಎಸಿಪಿ ಕಚೇರಿಯಲ್ಲಿ ಹೆಚ್ಚಿದ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಮಂಗಳೂರು ಬಾಂಬ್: 'ಕುಮಾರಸ್ವಾಮಿ ಮಾಹಿತಿ ತಿಳಿದು ಮಾತಾಡಲಿ'..!
ಎಸಿಪಿ ಕಚೇರಿಯಲ್ಲೇ ಪೊಲೀಸ್ ಸಿಬ್ಬಂದಿಗೆ ಭೋಜನ ತಯಾರಿಸಲು ವ್ಯವಸ್ಥೆ ಮಾಡಲಾಗಿದೆ. ಬಾಂಬರ್ ಆದಿತ್ಯ ಭದ್ರತೆಗೆ 50ಕ್ಕೂ ಅಧಿಕ ಪೊಲೀಸರನ್ನು ನೇಮಿಸಲಾಗಿದೆ. ಪೊಲೀಸರು ಪಣಂಬೂರು ಕಚೇರಿಗೆ ಅಡುಗೆ ತಯಾರಿ ವಸ್ತುಗಳನ್ನ ತರಿಸಿಕೊಂಡಿದ್ದಾರೆ. ಸ್ಥಳೀಯ ಬಾಣಸಿಗನ ಮೂಲಕ ಸಿಬ್ಬಂದಿಗೆ ಭೋಜನ ತಯಾರಿಗೆ ವ್ಯವಸ್ಥೆ ಮಾಡಲಾಗಿದೆ.