ಕೋಲಾರ: ಚಿಲ್ಲರೆ ಹಣಕ್ಕಾಗಿ ಬಸ್ ಕಂಡಕ್ಟರ್-ಪ್ರಯಾಣಿಕನ ಮಧ್ಯೆ ಡಿಶುಂ ಡಿಶುಂ..!
ಕೇವಲ ಐದು ರೂಪಾಯಿ ಚಿಲ್ಲರೆಗಾಗಿ ರಸ್ತೆ ಮಧ್ಯೆಯೇ ಇಬ್ಬರ ಬಡಿದಾಟ| ಕೋಲಾರ ಜಿಲ್ಲೆಯ ಜಿಲ್ಲೆಯ ಮುಳಬಾಗಿಲು ಪಟ್ಟಣದಲ್ಲಿ ನಡೆದ ಘಟನೆ| ಟಿಕೆಟ್ ಕೊಡುವ ಮಿಷನ್ ಪುಡಿ ಪುಡಿ|
ಕೋಲಾರ(ನ.28): ಚಿಲ್ಲರೆ ಹಣಕ್ಕಾಗಿ ಕೆಎಸ್ಆರ್ಟಿಸಿ ಕಂಡಕ್ಟರ್ವೊಬ್ಬರು ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಮುಳಬಾಗಿಲು ಪಟ್ಟಣದ ಹಳೇ ಕೋರ್ಟ್ ಸರ್ಕಲ್ ಬಳಿ ಇಂದು(ಶನಿವಾರ) ನಡೆದಿದೆ. ಕೇವಲ ಐದು ರೂಪಾಯಿ ಚಿಲ್ಲರೆಗಾಗಿ ರಸ್ತೆ ಮಧ್ಯೆಯೇ ಇಬ್ಬರು ಬಡಿದಾಡಿಕೊಂಡಿದ್ದಾರೆ.
ವಿದೇಶದಲ್ಲಿ ಲಕ್ಷ ಲಕ್ಷ ಸಂಬಳದ ಕೆಲಸಕ್ಕೆ ಗುಡ್ ಬೈ ಹೇಳಿ ಮೀನಿನ ವ್ಯಾಪಾರ ಶುರು ಮಾಡಿದ ಯುವಕ
ಕಂಡಕ್ಟರ್ ಟಿಕೆಟ್ ಹಿಂದೆ ಐದು ರೂಪಾಯಿ ಚಿಲ್ಲರೆ ಬರೆದುಕೊಟ್ಟಿದ್ದರು. ಐದು ರೂಪಾಯಿ ಚಿಲ್ಲರೆ ಇಲ್ಲ ಎಂದಿದಕ್ಕೆ ಪ್ರಯಾಣಿಕ ಹಾಗೂ ಕಂಡಕ್ಟರ್ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳದು ಇಬ್ಬರೂ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಈ ವೇಳೆ ಟಿಕೆಟ್ ಕೊಡುವ ಮಿಷನ್ ಪುಡಿ ಪುಡಿಯಾಗಿದೆ. ನಡು ರಸ್ತೆಯಲ್ಲೇ ಇಬ್ಬರ ಹೊಡೆದಾಟದ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.