ನಗರಸಭೆ ಸದಸ್ಯನ ದರ್ಪ: ಕೆಲಸ ಮಾಡಲ್ಲ ಎಂದು ಪೌರ ಕಾರ್ಮಿಕರ ಪಟ್ಟು
ನಗರಸಭೆ ಸದಸ್ಯ ಅವಾಚ್ಯ ಶಬ್ದಗಳಿಂದ ಪೌರಕಾರ್ಮಿಕರನ್ನು ನಿಂದಿಸಿದ ಹಿನ್ನೆಲೆ ಪೌರ ಕಾರ್ಮಿಕರು ಕೋಲಾರ ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಬೆಳ್ಳಂಬೆಳಗ್ಗೆ ಕೆಲಸಗಳನ್ನು ಬಿಟ್ಟು ನಗರಸಭೆ ಮುಂದೆ ಪ್ರತಿಭಟನೆ ನಡೆಸಿದ ಪೌರ ಕಾರ್ಮಿಕರು ಕೋಲಾರದ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕೋಲಾರ(ಜ.23): ನಗರಸಭೆ ಸದಸ್ಯ ಅವಾಚ್ಯ ಶಬ್ದಗಳಿಂದ ಪೌರಕಾರ್ಮಿಕರನ್ನು ನಿಂದಿಸಿದ ಹಿನ್ನೆಲೆ ಪೌರ ಕಾರ್ಮಿಕರು ಕೋಲಾರ ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಬೆಳ್ಳಂಬೆಳಗ್ಗೆ ಕೆಲಸಗಳನ್ನು ಬಿಟ್ಟು ನಗರಸಭೆ ಮುಂದೆ ಪ್ರತಿಭಟನೆ ನಡೆಸಿದ ಪೌರ ಕಾರ್ಮಿಕರು ಕೋಲಾರದ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಚಿತ್ರದುರ್ಗ: 5 ನಿಮಿಷದಲ್ಲಿ ಮೂರು ಕರುಗಳಿಗೆ ಜನ್ಮ ನೀಡಿದ ಗೋಮಾತೆ
ವಾರ್ಡ್ ನಂ.14ನೇ ನಗರಸಭೆ ಸದಸ್ಯ ಎಸ್.ಆರ್.ಮುರಳೀಗೌಡ ಪೌರ ಕಾರ್ಮಿಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ದಲಿತ ದೌರ್ಜನ್ಯ ಕಾಯ್ದೆಯಡಿ ಸದಸ್ಯನ ವಿರುದ್ಧ ಪ್ರಕರಣ ದಾಖಲಿಸುವಂತೆ ಪೌರ ಕಾರ್ಮಿಕರು ಆಗ್ರಹಿಸಿದ್ದಾರೆ. ಸದಸ್ಯನ ವಿರುದ್ದ ಕ್ರಮ ಕೈಗೊಳ್ಳುವವರೆಗೂ ಕೆಲಸ ಮಾಡುವುದಿಲ್ಲವೆಂದು ಕಾರ್ಮಿಕರ ಪಟ್ಟು ಹಿಡಿದಿದ್ದಾರೆ.