ಸ್ಟೀಲ್ ಫ್ಲೈಓವರ್ ಕೈಬಿಟ್ಟಿ ಸರ್ಕಾರ: 'ನಮ್ಮ ಬೆಂಗಳೂರು ಪ್ರತಿಷ್ಠಾನ'ಕ್ಕೆ ಜಯ
3 ವರ್ಷಗಳಿಂದ ವಿವಾದ ಮತ್ತು ನಿರಂತರ ಪ್ರತಿಭಟನೆಗಳಿಗೆ ಕಾರಣವಾಗಿದ್ದ ಬಸವೇಶ್ವರ ಸರ್ಕಲ್ ಟು ಹೆಬ್ಬಾಳ್ ವರೆಗಿನ ಸ್ಟೀಲ್ ಫ್ಲೈಓವರ್ ಯೋಜನೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ.
ಬೆಂಗಳೂರು, (ಜೂ.18): 3 ವರ್ಷಗಳಿಂದ ವಿವಾದ ಮತ್ತು ನಿರಂತರ ಪ್ರತಿಭಟನೆಗಳಿಗೆ ಕಾರಣವಾಗಿದ್ದ ಬಸವೇಶ್ವರ ಸರ್ಕಲ್ ಟು ಹೆಬ್ಬಾಳ್ ವರೆಗಿನ ಸ್ಟೀಲ್ ಫ್ಲೈಓವರ್ ಯೋಜನೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ.
ಯೋಜನೆಯಿಂದ ಹಿಂದೆ ಸರಿದಿರುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್ಗೆ ಮೆಮೋ ಸಲ್ಲಿಕೆ ಮಾಡಿದೆ. ಸರ್ಕಾರದ ಸ್ಟೀಲ್ ಫ್ಲೈಓವರ್ ಯೋಜನೆ ವಿರುದ್ಧ “ನಮ್ಮ ಬೆಂಗಳೂರು ಪ್ರತಿಷ್ಠಾನ” ಸಂಸ್ಥೆ ಹೈಕೋರ್ಟ್ನಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಜಯ ಸಿಕ್ಕಂತಾಗಿದೆ.