Asianet Suvarna News Asianet Suvarna News

ನನ್ನ ವೋಟು ನನ್ನ ಮಾತು : ಚುನಾವಣೆ ಬಗ್ಗೆ ಹಿರೇಕೆರೂರು ರಟ್ಟೀಹಳ್ಳಿ ಮಂದಿ ಏನ್‌ ಹೇಳಿದ್ರು ನೋಡಿ....

ನನ್ನ ವೋಟು ನನ್ನ ಮಾತು ಎಂಬ ವಿಶೇಷ ಕಾರ್ಯಕ್ರಮದಡಿ, ಹಿರೇಕೆರೂರು ರಟ್ಟೀಹಳ್ಳಿ ಮತದಾರರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
 

ನನ್ನ ವೋಟು ನನ್ನ ಮಾತು ಎಂಬ ವಿಶೇಷ ಕಾರ್ಯಕ್ರಮದಡಿ, ಹಿರೇಕೆರೂರು ರಟ್ಟೀಹಳ್ಳಿ ಮತದಾರರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯ ಕಾವು ಜೋರಾಗಿದೆ, ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ.  ರಾಜಕಾರಣಿಗಳು ಬಿಝಿಯಾಗಿದ್ದಾರೆ. ಇನ್ನೊಂದು ಕಡೆ ಮತದಾರರು ಕೂಡಾ ಎಲ್ಲಾವನ್ನೂ ಕೂತು ಗಮನಿಸುತ್ತಿದ್ದು, ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.ಹಿರೇಕೆರೂರಿನಲ್ಲಿ ಬಣಕಾರ್ Vs ಬಿಸಿ ಪಾಟೀಲ್ ಮಧ್ಯೆ ಫೈಟ್‌ ಇದ್ದು ಮಿಶ್ರ ಪ್ರತಿಕ್ರಿಯೆಯನ್ನು ನೀಡಿದ್ದಾರೆ.  ಬಿಸಿ ಪಾಟೀಲ್ ಉತ್ತಮ ಕೆಲಸವನ್ನು ಮಾಡಿದ್ದಾರೆ ಹಿರೇಕೆರೂರಿಗೆ ರೋಡ್‌ ಮಾಡಿದ್ದಾರೆ. ಶಾಲೆಯನ್ನು ಕಟ್ಟಿಸಿದ್ದಾರೆ, ಕೆರೆಗಳನ್ನು ತುಂಬಿಸಿದ್ದಾರೆ  ಬಿಸಿ ಪಾಟೀಲ್ ರಿಂದ ಬಹಳ ಅಭಿವೃದ್ದಿಯಾಗಿದೆ ಎಂದು ಹೇಳಿದರು. ಹಾಗೇ ಕಾಂಗ್ರೆಸ್‌ ಬರಬೇಕು ಸಿದ್ದರಾಮಯ್ಯ ಅಭಿವೃದ್ದಿಯನ್ನು ಮಾಡಿದ್ದಾರೆ ಎಂದು ಹೇಳಲಾಗಿದೆ  

Video Top Stories