Asianet Suvarna News Asianet Suvarna News

ಶರವಣ ಪುತ್ರಿಯ ಸರಳ ವಿವಾಹ,  ಅಭಿನಂದನೆ ವಧು-ವರರಿಗೆ

ಲಾಕ್ ಡೌನ್ ನಡುವೆ ಶರವಣ ಪುತ್ರಿಯ ಸರಳ ವಿಹಾಹ/ ಆಗಮಿಸಿದ ಗಣ್ಯರ ದಂಡು/ ಬಸವನಗುಡಿಯಲ್ಲಿ ಸರಳ ಮದುವೆ/  ಜೆಡಿಎಸ್ ನಾಯಕ ಟಿಎ ಶರವಣ

ಬೆಂಗಳೂರು(ಜೂ. 10) ಲಾಕ್ ಡೌನ್ ನಡುವೆ ಜೆಡಿಎಸ್ ನಾಯಕರೊಬ್ಬರು ತಮ್ಮ ಮಗಳ ಮದುವೆಯನ್ನು ಸರಳವಾಗಿ ಮಾಡಿ ಮುಗಿಸಿದ್ದಾರೆ.  ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಏ.17ಕ್ಕೆ ನಿಗದಿಯಾಗಿದ್ದ ಮದುವೆಯನ್ನು ಮುಂದೂಡಿದ್ದ ಜೆಡಿಎಸ್ ವಿಧಾನಪರಿಷತ್ ಸದಸ್ಯ ಶರವಣ ತಮ್ಮ ಪುತ್ರಿಯ ವಿವಾಹವನ್ನು ನೆರವೇರಿಸಿದ್ದಾರೆ.

ಶರವಣ ಪುತ್ರಿ ಮದುವೆಗೆ ಯಾರೆಲ್ಲ ಬಂದಿದ್ದರು?

ಬಸವನಗುಡಿಯ ವಾಸವಿ ಕಲ್ಯಾಣ ಮಂಟಪದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಶ್ರೇಯಾ ಮತ್ತು ಶೇಶಿರುದ್ಧ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ವಿಪಕ್ಷ ನಾಯಕ ಸಿದ್ದರಾಮಯ್ಯ, ಜಯದೇವ ಆಸ್ಪತ್ರೆಯ ಡಾ. ಮಂಜುನಾಥ್, ವಿನಯ್ ಗುರೂಜಿ, ಎಚ್‌ಡಿ ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ಮದುವೆಗೆ ಆಗಮಿಸಿ ಶುಭಕೋರಿದರು. 

Video Top Stories