Asianet Suvarna News Asianet Suvarna News

'ಜೈನ ಸಮುದಾಯಕ್ಕೂ ಪ್ರಾಧಿಕಾರ ಬೇಕು'  ಸಿಎಂ ಮುಂದೆ ಬೇಡಿಕೆ

ಮರಾಠ ಪ್ರಾಧಿಕಾರ ಆಯ್ತು, ಲಿಂಗಾಯತ ಪ್ರಾಧಿಕಾರ ಆಯ್ತು/ ಜೈನ ಸಮುದಾಯಕ್ಕೂ ಒಂದು ಪ್ರಾಧಿಕಾರ ಮಾಡಿ/ ಸಿಎಂ ಬಿಎಸ್ ಯಡಿಯೂರಪ್ಪಗೆ ಮನವಿ/ ಜೈನ ಸ್ಮಾರಕಗಳನ್ನು ರಕ್ಷಣೆ ಮಾಡಿ

ಬೆಂಗಳೂರು(ನ. 18)  ರಾಜ್ಯದಲ್ಲಿ ಒಂದಾದ ಒಂದು ಪ್ರಾಧಿಕಾರ ರಚನೆಯಾಗುತ್ತಿರುವ ಸಂದರ್ಭದಲ್ಲಿ ಕರ್ನಾಟಕ ಜೈನ್ ಅಸೋಸಿಯೇಷನ್ ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿದೆ.  ಮಾರಾಠ, ಲಿಂಗಾಯತ ನಿಗಮದಂತೆ ಜೈನ ನಿಗಮ ಮಾಡಿ ನೂರು ಕೋಟಿ ರೂ. ಅನುದಾನ ನೀಡಿ ಎಂದು ಮನವಿ ಮಾಡಿಕೊಂಡಿದೆ.

ಪ್ರಾಧಿಕಾರಕ್ಕೆ ಪತ್ರ.. ಒಂದಾದ ಮೇಲೆ ಒಂದು ಬರುತ್ತಲೇ ಇದೆ

ಮಾರಾಠ ಪ್ರಾಧಿಕಾರಕ್ಕೆ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಡಿಸೆಂಬರ್ ಐದಕ್ಕೆ ಬಂದ್ ಗೂ ಕರೆ ನೀಡಿವೆ. ಈ ನಡುವೆ ಜೈನ ಸಂಘಟನೆಗಳು ತಮಗೂ ಒಂದು ಪ್ರಾಧಿಕಾರ ಬೇಕು ಎಂದು ಮನವಿ ಮಾಡಿಕೊಂಡಿವೆ. 

Video Top Stories