Asianet Suvarna News Asianet Suvarna News

ಮದ್ಯ ಮಾರಾಟಕ್ಕೆ ಅನುಮತಿ ನೀಡದಂತೆ ಕಣ್ಣೀರಿಟ್ಟ ಇಳಕಲ್‌ ಗುರುಮಹಾಂತ ಶ್ರೀಗಳು

ಮದ್ಯ ಮಾರಾಟಕಕ್ಕೆ ಅನುಮತಿ ನೀಡಬೇಡಿ: ಗುರುಮಹಾಂತ ಶ್ರೀಗಳು: ಕಣ್ಣೀರಿನ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ ಶ್ರೀಗಳು| ಬಾಗಲಕೋಟೆ ಜಿಲ್ಲೆಯ ಇಳಕಲ್‌ಮ ಪಟ್ಟಣದಲ್ಲಿರುವ ಚಿತ್ತರಗಿ ವಿಜಯ ಮಹಾಂತೇಶ ಮಠ|

ಬಾಗಲಕೋಟೆ(ಮೇ.04): ಮದ್ಯ ಮಾರಾಟಕಕ್ಕೆ ಅನುಮತಿ ನೀಡದಂತೆ ಜಿಲ್ಲೆ ಇಳಕಲ್ಲನ ಚಿತ್ತರಗಿ ವಿಜಯ ಮಹಾಂತೇಶ ಮಠದ ಗುರುಮಹಾಂತ ಶ್ರೀಗಳು ಕಣ್ಣೀರಿನ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಮದ್ಯ ನಿಷೇಧಕ್ಕೆ ಇದು ಸಕಾಲ ಎಂದು ಶ್ರೀಗಳು ಕಣ್ಣೀರಿಟ್ಟಿದ್ದಾರೆ. 

ಕೊರೋನಾ ಅಟ್ಟಹಾಸ: 'ಕಲಬುರಗಿ ಜಿಲ್ಲೆಯಲ್ಲಿ ಲಾಕ್‌ಡೌನ್‌ ಸಡಿಲಿಕೆ ಬೇಡ'

ಕೆಳೆದ 40 ದಿನಗಳಿಂದ ಮದ್ಯ ಮಾರಾಟಕ್ಕೆ ನಿಷೇಧ ಹೇರಿದ್ದ ರಾಜ್ಯ ಸರ್ಕಾರ ಮತ್ತೆ ಇಂದಿನಿಂದ ಮತ್ತೆ ಮದ್ಯ ಮಾರಾಟಕ್ಕೆ ಷರತ್ತುಬದ್ಧ ಅನುಮತಿ ನೀಡಿದೆ. ಹೀಗಾಗಿ ಮದ್ಯ ಮಾರಾಟ ನಿಷೇಧಿಸಿ ಎಂದು ಗುರುಮಹಾಂತ ಸ್ವಾಮೀಜಿಗಳು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
 

Video Top Stories