Asianet Suvarna News Asianet Suvarna News

ಕೋರ್ಟ್ ಮೂಲಕ ಗೋವುಗಳನ್ನು ಬಿಡಿಸಿ ಸಂಭ್ರಮಾಚರಣೆ!

ಅಕ್ರಮ ಗೋ ಸಾಗಾಟ ಕೇಸಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದ ‌ಗೋವುಗಳನ್ನು ಬಿಡಿಸಿದ ಬಳಿಕ ಯುವಕರ ಗುಂಪೊಂದು ಸಂಭ್ರಮಾಚರಣೆ ಮಾಡಿರುವ ಘಟನೆ ಮಂಗಳೂರಿನ ಜೋಕಟ್ಟೆಯಲ್ಲಿ ನಡೆದಿದೆ.

ಮಂಗಳೂರು (ಜೂ.22):  ಅಕ್ರಮ ಗೋ ಸಾಗಾಟ ಕೇಸಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದ ‌ಗೋವುಗಳನ್ನು ಬಿಡಿಸಿದ ಬಳಿಕ ಯುವಕರ ಗುಂಪೊಂದು ಸಂಭ್ರಮಾಚರಣೆ ಮಾಡಿರುವ ಘಟನೆ ಮಂಗಳೂರಿನ ಜೋಕಟ್ಟೆಯಲ್ಲಿ ನಡೆದಿದೆ.

ಕೆಲ ದಿನಗಳ ‌ಹಿಂದೆ ಪಣಂಬೂರು ಪೊಲೀಸರು ಅಕ್ರಮ ಸಾಗಾಟದ ಆರೋಪದ ಮೇಲೆ ಗೋವುಗಳನ್ನು ವಶಕ್ಕೆ ಪಡೆದಿದ್ದರು. ಬಳಿಕ ಅವುಗಳನ್ನು ಪಜೀರು ಗೋ ಶಾಲೆಗೆ ಸಾಗಿಸಲಾಗಿತ್ತು. 

ಆದರೆ ಈಗ, ನ್ಯಾಯಾಲಯದ ‌ಮೂಲಕ ಗೋವುಗಳನ್ನು ಬಿಡಿಸಲಾಗಿದ್ದು, ಅದರ ವಾರಸುದಾರರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸಾಮಾಜಿಕ ‌ತಾಣಗಳಲ್ಲಿ ವೈರಲ್ ಆಗಿರುವ ಈ ಸಂಭ್ರಮಾಚರಣೆ ವಿಡಿಯೋ, ಹಿಂದೂ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.