Asianet Suvarna News Asianet Suvarna News

ರಾಜಕೀಯ ದ್ವೇಷ, ಅಡಿಕೆ ಮರಗಳಿಗೆ ಬಿತ್ತು ಬೆಂಕಿ, ಕಣ್ಣೀರಲ್ಲಿ ಕುಟುಂಬ!

ರಾಜಕೀಯ ಪ್ರಚಾರಕ್ಕೆ ಹೋಗಿದ್ದಕ್ಕೆ ಅಡಿಕೆ ಮರಗಳನ್ನೇ ಕಳೆದುಕೊಂಡಿದೆ ಈ ಕುಟುಂಬ. ತುಮಕೂರು ಜಿಲ್ಲೆ ಗುಬ್ಬಿ ತಾ. ಸಿಎಸ್ ಪುರ ಹೋಬಳಿಯ ನೆಟ್ಟೆಕೆರೆ ಗೇಟ್ ವಾಸಿ ಮಾಯಣ್ಣ ಗೌಡ ಎಂಬುವವರಿಗೆ ಸೇರಿದ ಸುಮಾರು 250 ಕ್ಕೂ ಹೆಚ್ಚು ಅಡಿಕೆ ಮರಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. 

ತುಮಕೂರು (ಜ. 02): ರಾಜಕೀಯ ಪ್ರಚಾರಕ್ಕೆ ಹೋಗಿದ್ದಕ್ಕೆ ಅಡಿಕೆ ಮರಗಳನ್ನೇ ಕಳೆದುಕೊಂಡಿದೆ ಈ ಕುಟುಂಬ. ತುಮಕೂರು ಜಿಲ್ಲೆ ಗುಬ್ಬಿ ತಾ. ಸಿಎಸ್ ಪುರ ಹೋಬಳಿಯ ನೆಟ್ಟೆಕೆರೆ ಗೇಟ್ ವಾಸಿ ಮಾಯಣ್ಣ ಗೌಡ ಎಂಬುವವರಿಗೆ ಸೇರಿದ ಸುಮಾರು 250 ಕ್ಕೂ ಹೆಚ್ಚು ಅಡಿಕೆ ಮರಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಇದರಿಂದ ಹನಿ ನೀರಾವರಿ ಪೈಪ್‌ಗಳು, ಮೋಟಾರ್ ಪಂಪ್‌ ಸೇರಿ ಸುಮಾರು 10 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. 

ಅತ್ತ ಗಂಡನ ಕಿರುಕುಳ, ಇತ್ತ ಪಾಗಲ್ ಪ್ರೇಮಿ ಕಾಟ: ಬೆಳ್ಳಂ ಬೆಳಿಗ್ಗೆ ಮಾರಣ ಹೋಮ!