Asianet Suvarna News Asianet Suvarna News

ಬೆಂಗ್ಳೂರಿನಿಂದ ನಾಪತ್ತೆಯಾದವ ಗದಗದಲ್ಲಿ ಪತ್ತೆ; ನಡೆದೇ ಊರು ಸೇರಿದ ಯುವಕ!

  • ಬೆಂಗಳೂರಿನಲ್ಲಿ ಕಾಣೆಯಾಗಿದ್ದ ವ್ಯಕ್ತಿ ಮುಂಡರಗಿಯಲ್ಲಿ ಪತ್ತೆ
  • ಪಾದಯಾತ್ರೆ ಮೂಲಕ ಗದಗ ಜಿಲ್ಲೆಗೆ ಆಗಮಿಸಿದ ಖಾಸಗಿ ಕಂಪನಿ‌ ನೌಕರ
  • ವಿಜಯಪುರ ಮೂಲದ ಮಲ್ಲಿಕಾರ್ಜುನ ಗುರುಮಠ ಅನ್ನೋ ವ್ಯಕ್ತಿ
First Published Apr 20, 2020, 10:11 PM IST | Last Updated Apr 20, 2020, 10:11 PM IST

ಗದಗ (ಏ.20): ಬೆಂಗಳೂರಿನಲ್ಲಿ ಕಾಣೆಯಾಗಿದ್ದ ವ್ಯಕ್ತಿ ಮುಂಡರಗಿಯಲ್ಲಿ ಪತ್ತೆಯಾಗಿದ್ದಾನೆ. ಲಾಕ್‌ಡೌನ್ ಶುರುವಾಗುತ್ತಲೇ ಕಾಣೆಯಾಗಿದ್ದ ಮಲ್ಲಿಕಾರ್ಜುನ ಗುರುಮಠ, ಪಾದಯಾತ್ರೆ ಮೂಲಕ ತನ್ನೂರು ಸೇರಿದ್ದಾನೆ.

ಬೆಂಗಳೂರಿನ ಸುಬ್ರಮಣ್ಯ ನಗರ ಪೊಲಿಸ್ ಠಾಣೆಯಲ್ಲಿ ದೂರು‌ ದಾಖಲಾಗಿತ್ತು. ಮುಂಡರಗಿ ಪೊಲಿಸರು ಆತನನ್ನು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಜೊತೆಗೆ ವಿಚಾರಣೆ ನಡೆಸಿದ್ದಾರೆ.