Asianet Suvarna News Asianet Suvarna News

'ದಾಖಲೆ ಇಟ್ಟು ಸಾಬೀತು ಮಾಡಲಿ'  ಈಶ್ವರಪ್ಪ ಪರ ಆರಗ ಬ್ಯಾಟಿಂಗ್!

* ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ
* ಈಶ್ವರಪ್ಪ ರಾಜೀನಾಮೆ 
* ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಯಲಿದೆ
* ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ 

First Published Apr 15, 2022, 4:25 PM IST | Last Updated Apr 15, 2022, 4:25 PM IST

ಶಿವಮೊಗ್ಗ(ಏ. 15)  ಸಂತೋಷ್ ಆತ್ಮಹತ್ಯೆ (Contractor Santhosh Suicide) ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆ ಮಾಡಲಾಗುತ್ತಿದೆ.  ತನಿಖೆಗೆ ಯಾವ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಕೆಎಸ್ ಈಶ್ವರಪ್ಪ (KS Eshwarappa) ರಾಜೀನಾಮೆ ನೀಡಿದ್ದಾರೆ. ಇದು ಯಾವ ಕಪ್ಪು ಚುಕ್ಕೆಯೂ ಅಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ.

ರಾಜೀನಾಮೆಗೂ ಮುನ್ನ ಈಶ್ವರಪ್ಪ ಶಕ್ತಿ ಪ್ರದರ್ಶನ..!

ಈಶ್ವರಪ್ಪ ಮೇಲೆ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ವಾಟ್ಸಪ್ ನಲ್ಲಿ ಡೆತ್ ನೊಟ್ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಶ್ವರಪ್ಪ ರಾಜೀನಾಮೆ ಮತ್ತು ಬಂಧನಕ್ಕೆ ಒತ್ತಾಯಿಸಿ ಕಾಂಗ್ರೆಸ್ (Congress) ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತ್ತು.