Asianet Suvarna News Asianet Suvarna News

ಕನ್ನಡ ಪ್ರಭ ವರದಿ ಹೆಸರಲ್ಲಿ ಸುಳ್ಳು ಸಮೀಕ್ಷೆ, ಪತ್ರಿಕೆಯಿಂದ ದೂರು

ಕನ್ನಡಪ್ರಭ ಪತ್ರಿಕೆ ಹೆಸರಿನಲ್ಲಿ ಸುಳ್ಳು ಸುದ್ದಿ ವೈರಲ್‌ ಆಗಿದ್ದು, ಪತ್ರಿಕೆ ಹೆಸರು ದುರ್ಬಳಕೆ ಮಾಡಿಕೊಂಡ ಕಿಡಿಗೇಡಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.

First Published Mar 15, 2023, 12:41 PM IST | Last Updated Mar 15, 2023, 1:48 PM IST

ಕನ್ನಡಪ್ರಭ ಪತ್ರಿಕೆ ಹೆಸರಿನಲ್ಲಿ ಸುಳ್ಳು ಸುದ್ದಿ ವೈರಲ್‌ ಆಗಿದ್ದು, ಆರ್‌ ಎಸ್‌ ಎಸ್‌  ಆಂತರಿಕ ಸಮೀಕ್ಷೆ ಬಹಿರಂಗ ‌ಎಂಬ ವರದಿ ಪ್ರಕಟಿಸಲಾಗಿದ್ದು, ಈ ಸುಳ್ಳು ಸುದ್ದಿಯ ಬಗ್ಗೆ ಕನ್ನಡಪ್ರಭ ಸ್ಪಷ್ಟನೆ ನೀಡಿದೆ. ಕನ್ನಡಪ್ರಭ ಪತ್ರಿಕೆಗೂ, ಈ ವರದಿಗೂ ಯಾವುದೇ ಸಂಬಂಧ ಇಲ್ಲ, ಹಾಗೇ ಕನ್ನಡಪ್ರಭ ಇಂಥ ಯಾವುದೇ ಸಮೀಕ್ಷೆ ನಡೆಸಿಲ್ಲ, ಪ್ರಕಟಿಸಿಯೂ ಇಲ್ಲ ಎಂದು ತಿಳಿಸಿದೆ.ಇನ್ನು ಕನ್ನಡಪ್ರಭ ಹೆಸರು ದುರ್ಬಳಕೆ ಮಾಡಿಕೊಂಡ ಕಿಡಿಗೇಡಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.