Asianet Suvarna News Asianet Suvarna News

KPCC ಅಧ್ಯಕ್ಷಗಾದಿ ತೊಡಕು ನಿವಾರಣೆಗೆ ಯಾಗ, ಪಂಚೆ ಶಲ್ಯದಲ್ಲಿ ಡಿಕೆಶಿ ಮಿಂಚಿಂಗ್..!

ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರು ತುಮಕೂರಿನಲ್ಲಿ ಶತ ಚಂಡಿಕಾ ಹೋಮದಲ್ಲಿ ಭಾಗಿಯಾಗಿದ್ದಾರೆ. ತುಮಕೂರಿನ ಹಂಗರಹಳ್ಳಿಯಲ್ಲಿರುವ ವಿದ್ಯಾಚೌಡೇಶ್ವರಿ ಮಹಾಸಂಸ್ಥಾನ ಮಠದಲ್ಲಿ ನಡೆದ ಶತಚಂಡಿಕಾ ಮಹಾಯಾಗ ಹೋಮದಲ್ಲಿ ಪಾಲ್ಗೊಂಡ ಡಿಕೆಶಿ ಪೂಜೆ ಸಲ್ಲಿಸಿದ್ದಾರೆ.

ತುಮಕೂರು(ಜ.17): ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರು ತುಮಕೂರಿನಲ್ಲಿ ಶತ ಚಂಡಿಕಾ ಹೋಮದಲ್ಲಿ ಭಾಗಿಯಾಗಿದ್ದಾರೆ. ತುಮಕೂರಿನ ಹಂಗರಹಳ್ಳಿಯಲ್ಲಿರುವ ವಿದ್ಯಾಚೌಡೇಶ್ವರಿ ಮಹಾಸಂಸ್ಥಾನ ಮಠದಲ್ಲಿ ನಡೆದ ಶತಚಂಡಿಕಾ ಮಹಾಯಾಗ ಹೋಮದಲ್ಲಿ ಪಾಲ್ಗೊಂಡ ಡಿಕೆಶಿ ಪೂಜೆ ಸಲ್ಲಿಸಿದ್ದಾರೆ.

ವಿದ್ಯಾ ಚೌಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದಲ್ಲಿ ಚಂಡಿಕಾ‌ಯಾಗ ನಡೆಸಿದ್ದು, ಕೆಪಿಸಿಸಿ ಅಧ್ಯಕ್ಷ ಗಾದಿಗೆ ಇರುವ ವಿಘ್ನ ನಿವಾರಣೆಗಾಗಿ ಪೂಜೆ ಸಲ್ಲಿಸಿದ್ದಾರೆ. ನಂಜಾವಧೂತ ಸ್ವಾಮೀಜಿ ನೇತೃತ್ವದಲ್ಲಿ ವಿಶೇಷ ಪೂಜೆ ನಡೆದಿದ್ದು, ಶಲ್ಯ ಪಂಚೆಧಾರಿಯಾಗಿ ಡಿಕೆಶಿ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಕುಣಿಗಲ್ ಶಾಸಕ ಡಾ.ರಂಗನಾಥ್ ಅವರು ಡಿಕೆಶಿ ಅವರಿಗೆ ಸಾಥ್ ಕೊಟ್ಟಿದ್ದಾರೆ.

ಮೊದಲ ಪೂಜೆಗಾಗಿ ದೇವರ ಮುಂದೆಯೇ ಕಿತ್ತಾಡ್ಕೊಂಡ BJP, JDS ಮುಖಂಡರು..!