ಲಾಕ್ ಡೌನ್ ಪರಿಣಾಮ ಆಹಾರವಿಲ್ಲದೇ ದೇಗುಲದ ಅಂಗಳದಲ್ಲಿ ಮಂಗಗಳ ನರಳಾಟ
- ಲಾಕ್ ಡೌನ್ ಪರಿಣಾಮ ಆಹಾರವಿಲ್ಲದೇ ದೇಗುಲದ ಅಂಗಳದಲ್ಲಿ ಮಂಗಗಳ ನರಳಾಟ
- ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಶ್ರೀಕ್ಷೇತ್ರ ಕಾರಿಂಜೇಶ್ವರ ದೇಗುಲದಲ್ಲಿ ಘಟನೆ
- ದೇವಸ್ಥಾನ ಬಂದ್ ಆಗಿರುವ ಕಾರಣ ಮಂಗಗಳಿಗೂ ತಟ್ಟಿದ ಆಹಾರ ಕೊರತೆ
ಮಂಗಳೂರು (ಮೇ. 31): ಲಾಕ್ಡೌನ್ ಜನಸಾಮಾನ್ಯರ ಜೀವನದ ಮೇಲೆ ಮಾತ್ರವಲ್ಲ, ಪ್ರಾಣಿಗಳ ಮೇಲೆಯೂ ಪರಿಣಾಮ ಬೀರಿದೆ. ಲಾಕ್ಡೌನ್ ಪರಿಣಾಮ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಶ್ರೀಕ್ಷೇತ್ರ ಕಾರಿಂಜೇಶ್ವರ ದೇಗುಲದಲ್ಲಿ ಮಂಗಗಳು ಆಹಾರವಿಲ್ಲದೇ ನರಳಾಡುತ್ತಿವೆ. ನಿತ್ಯ ಐದು ಕೆ.ಜಿ.ಅಕ್ಕಿಯ ಅನ್ನವನ್ನು ಮಂಗಗಳಿಗೆ ಆಹಾರದ ರೂಪದಲ್ಲಿ ನೀಡಲಾಗುತ್ತಿತ್ತು. ಲಾಕ್ಡೌನ್ನಿಂದ ದೇವಸ್ಥಾನ ಮುಚ್ಚಿದ್ದು ಮಂಗಗಳಿಗೆ ಆಹಾರವಿಲ್ಲದಂತಾಗಿದೆ.