Asianet Suvarna News Asianet Suvarna News

ಕರಾವಳಿಯ ದೈವಸ್ಥಾನಗಳ ವಿಚಾರದಲ್ಲಿ ಸರ್ಕಾರದ ಹಸ್ತಕ್ಷೇಪ, ಸಾರ್ವಜನಿಕರ ಆಕ್ರೋಶ

ರಾಜ್ಯದ ಧಾರ್ಮಿಕ ಕೇಂದ್ರಗಳನ್ನ ಹಲವು ವರ್ಷಗಳಿಂದ ಸರ್ಕಾರ ನಿಯಂತ್ರಿಸುತ್ತಲೇ ಬಂದಿದೆ. ಆದರೆ ಇಂಥ ಕೇಂದ್ರಗಳ ಆಚರಣೆಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಿದ ಪ್ರಕರಣಗಳಲ್ಲಿ ತೀವ್ರ ಅಸಮಾಧಾನಗಳು ವ್ಯಕ್ತವಾಗಿದ್ದೂ ಇದೆ. 
 

ಬೆಂಗಳೂರು (ಅ. 27): ರಾಜ್ಯದ ಧಾರ್ಮಿಕ ಕೇಂದ್ರಗಳನ್ನ ಹಲವು ವರ್ಷಗಳಿಂದ ಸರ್ಕಾರ ನಿಯಂತ್ರಿಸುತ್ತಲೇ ಬಂದಿದೆ. ಆದರೆ ಇಂಥ ಕೇಂದ್ರಗಳ ಆಚರಣೆಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಿದ ಪ್ರಕರಣಗಳಲ್ಲಿ ತೀವ್ರ ಅಸಮಾಧಾನಗಳು ವ್ಯಕ್ತವಾಗಿದ್ದೂ ಇದೆ. 

ಕೆಆರ್‌ಎಸ್‌ ಭರ್ತಿ, ಪ್ರವಾಹದ ಎಚ್ಚರಿಕೆ, ನದಿ ಪಾತ್ರದ ಬಳಿ ತೆರಳದಂತೆ ಸೂಚನೆ

ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ತಾಲೂಕಿನ ಕಾಂಪ್ರಬೈಲು ಶ್ರೀ ಉಳ್ಳಾಲ್ತಿ ಮತ್ತು ಅಜ್ಜರ ದೈವಗಳ ಭಂಡಾರಕ್ಕೆ ಸಂಬಂಧಿಸಿದಂತೆ ಬಾಳ್ತಿಲ ಬೀಡು ಮತ್ತು ದೈವಸ್ತಾನದ ಆಡಳಿತ ಸಮಿತಿಯ ನಡುವಿನ ಭಿನ್ನಾಭಿಪ್ರಾಯ ಬಹು ಚರ್ಚೆಗೆ ಗ್ರಾಸವಾಗಿದೆ. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರೋ ಈ ದೈವಸ್ಥಾನದಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಸೂಚನೆಯಂತೆ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಆದ್ರೆ ಈ ಆಡಳಿತ ಮಂಡಳಿ ರಾಜ್ಯ ಧಾರ್ಮಿಕ ಪರಿಷತ್ ಸೂಚನೆಯಂತೆ ದೈವಸ್ಥಾನದ ಹಲವು ವರ್ಷಗಳ ಸಂಪ್ರದಾಯವನ್ನೇ ಮುರಿದಿದೆ ಎಂಬ ಆರೋಪ ಕೇಳಿ ಬಂದಿದೆ. ಏನಿದು ಆರೋಪ..? ಇಲ್ಲಿದೆ ವಿವರ.