Asianet Suvarna News Asianet Suvarna News

ಸಣ್ಣ ವಯಸ್ಸಿನಲ್ಲಿ ಅಪ್ಪು ಸಾಯಬಾರದಿತ್ತು, ಭಾವಚಿತ್ರದ ಎದುರು ಕಣ್ಣೀರಿಟ್ಟ ಅಜ್ಜಿ..!

ಯಲಬುರ್ಗಾ ತಾಲೂಕಿನ ಕುಕನೂರಿನ ಬಸ್‌ವೊಂದರಲ್ಲಿ ಪುನೀತ್‌ ಭಾವಚಿತ್ರ ಕಂಡು ವೃದ್ಧೆಯೊಬ್ಬರು ಕಣ್ಣೀರಿಟ್ಟಿದ್ದಾರೆ.  ಪುನೀತ್‌ ಅವರ ಫೋಟೋ ಇದ್ದ ಜಾಹೀರಾತನ್ನು ಬಸ್‌ನಲ್ಲಿ ನೋಡಿದ ವೃದ್ಧೆ ಫೋಟೋವನ್ನು ಸೆರಗಿನಿಂದ ಒರೆಸಿ ಕಣ್ಣೀರಿಟ್ಟಿದ್ದಾರೆ. ಈ ದೃಶ್ಯ ಭಾರಿ ವೈರಲ್‌ ಆಗಿದೆ.

ಕೊಪ್ಪಳ (ನ. 14):  ಯಲಬುರ್ಗಾ ತಾಲೂಕಿನ ಕುಕನೂರಿನ ಬಸ್‌ವೊಂದರಲ್ಲಿ ಪುನೀತ್‌  (Puneeth Rajkumar) ಭಾವಚಿತ್ರ ಕಂಡು ವೃದ್ಧೆಯೊಬ್ಬರು ಕಣ್ಣೀರಿಟ್ಟಿದ್ದಾರೆ.  ಪುನೀತ್‌ ಅವರ ಫೋಟೋ ಇದ್ದ ಜಾಹೀರಾತನ್ನು ಬಸ್‌ನಲ್ಲಿ ನೋಡಿದ ವೃದ್ಧೆ ಫೋಟೋವನ್ನು ಸೆರಗಿನಿಂದ ಒರೆಸಿ ಕಣ್ಣೀರಿಟ್ಟಿದ್ದಾರೆ. ಈ ದೃಶ್ಯ ಭಾರಿ ವೈರಲ್‌ ಆಗಿದೆ.

'ಪುನೀತ್ ಸಣ್ಣವನಿದ್ದಾಗ ಟಿವಿಯಲ್ಲಿ ನೋಡಿದ್ದೆ. ಅಪ್ಪು ಇಲ್ಲ ಎಂದು ಯಾರೋ ಹೇಳಿದರು. ಇಷ್ಟು ಸಣ್ಣ ವಯಸ್ಸಿನಲ್ಲಿ ಸಾಯಬಾರದಿತ್ತು. ದುಃಖ ತಡೆಯಲಾಗಲಿಲ್ಲ' ಎಂದು ಅಜ್ಜಿ ಕಣ್ಣೀರಿಟ್ಟರು. ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಅಜ್ಜಿ ಮಾತನಾಡಿದರು.