Asianet Suvarna News Asianet Suvarna News

ಅರಣ್ಯ ಇಲಾಖೆ ಕಿರುಕುಳ, ದಯಾಮರಣಕ್ಕೆ ವೃದ್ಧ ದಂಪತಿ ಅರ್ಜಿ, PMO ಯಿಂದ ಸ್ಪಂದನೆ

ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾ. ಕೆ ದುರ್ಗಾ ಗ್ರಾಮದ ರಾಮೇಗೌಡ ದಂಪತಿ ಕಳೆದ 15 ವರ್ಷಗಳಿಂದ ಇಲ್ಲಿ 15 ಎಕರೆ ಜಮೀನು ಮಾಡಿಕೊಂಡಿದ್ದರು. ಅರಣ್ಯ ಇಲಾಖೆ ಈ ಜಮೀನು ನಮ್ಮದು ಅಂತ 10 ಎಕರೆ ಜಮೀನನ್ನು ವಶಪಡಿಸಿಕೊಂಡು 5 ಎಕರೆ ಜಮೀನನ್ನು ಮಾತ್ರ ಉಳಿಸಿದೆ. 

ಚಿಕ್ಕಮಗಳೂರು (ಫೆ. 1): ಅರಣ್ಯ ಇಲಾಖೆಯ ಕಿರುಕುಳದಿಂದ ನೊಂದ ವೃದ್ದ ದಂಪತಿಯೊಬ್ಬರು ದಯಾಮರಣಕ್ಕೆ ಅರ್ಜಿ ಸಲ್ಲಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

 ಮೂಡಿಗೆರೆ ತಾ. ಕೆ ದುರ್ಗಾ ಗ್ರಾಮದ ರಾಮೇಗೌಡ ದಂಪತಿ ಕಳೆದ 15 ವರ್ಷಗಳಿಂದ ಇಲ್ಲಿ 15 ಎಕರೆ ಜಮೀನು ಮಾಡಿಕೊಂಡಿದ್ದರು. ಅರಣ್ಯ ಇಲಾಖೆ ಈ ಜಮೀನು ನಮ್ಮದು ಅಂತ 10 ಎಕರೆ ಜಮೀನನ್ನು ವಶಪಡಿಸಿಕೊಂಡು 5 ಎಕರೆ ಜಮೀನನ್ನು ಮಾತ್ರ ಉಳಿಸಿದೆ.

ಈ ಜಾಗದಲ್ಲಿ ಕಾಫಿ, ಅಡಕೆ, ಮೆಣಸನ್ನು ಬೆಳೆದಿದ್ದರು. ಈಗ ಈ ಜಮೀನನ್ನೂ ಅರಣ್ಯ ಇಲಾಖೆ ವಶಪಡಿಸಿಕೊಳ್ಳಲು ಮುಂದಾಗಿದ್ದು ದಂಪತಿ ಕಂಗಾಲಾಗಿ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ಧಾರೆ. ಪ್ರಧಾನಿ ಕಚೇರಿಯಿಂದ ದಂಪತಿ ಪತ್ರಕ್ಕೆ ಸ್ಪಂದನೆ ಸಿಕ್ಕಿದೆ. ವೃದ್ಧ ದಂಪತಿ ನೆರವಿಗೆ ಬರುತ್ತಾ ಜಿಲ್ಲಾಡಳಿತ..?