ಚಿಕನ್ ಮಾರಾಟ ಪ್ರಶ್ನಿಸಿದ್ದಕ್ಕೆ ಮಾಲಿಕರಿಂದ ಪೇದೆ ಮೇಲೆ ಹಲ್ಲೆ
ಕದ್ದು ಮುಚ್ಚಿ ಚಿಕನ್ ಮಾರಾಟ ಮಾಡುತ್ತಿದ್ದವರನ್ನು ಪ್ರಶ್ನಿಸಿದ ಪೇದೆಯ ಮೇಲೆ ಮಾಲಿಕರು ಹಲ್ಲೆ ನಡೆಸಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಬೆಂಗಳೂರು (ಮೇ. 03): ಕದ್ದು ಮುಚ್ಚಿ ಚಿಕನ್ ಮಾರಾಟ ಮಾಡುತ್ತಿದ್ದವರನ್ನು ಪ್ರಶ್ನಿಸಿದ ಪೇದೆಯ ಮೇಲೆ ಮಾಲಿಕರು ಹಲ್ಲೆ ನಡೆಸಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಭಾನುವಾರ, ಮಂಗಳವಾರ ಹಾಗೂ ಶುಕ್ರವಾರ ಚಿಕನ್ ಮಾರಾಟ ಮಾಡಲು ಪುರಸಭೆ ಅನುಮತಿ ನೀಡಿದೆ. ಆದರೆ ಆ ದಿನಗಳನ್ನು ಹೊರತುಪಡಿಸಿ ಬೇರೆ ದಿನವೂ ಮಾರಾಟ ಮಾಡುತ್ತಿದ್ದರು. ಇದನ್ನು ಪ್ರಶ್ನಿಸಿ 3 ಬಾರಿ ನೋಟಿಸ್ ನೀಡಲಾಗಿತ್ತು. ಮಾಲಿಕರಾದ ತಬಿಲ್ ಹಾಗೂ ಖಲೀಲ್ ಎಂಬುವವರು ಪೇದೆ ನಾಗೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಮಾಲಿಕರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ವಲಸೆ ಕಾರ್ಮಿಕರ ಪರದಾಟ: ಸಾಮಾಜಿಕ ಅಂತರಕ್ಕೆ ಕ್ಯಾರೆ ಎನ್ನದ ಜನ..!