Asianet Suvarna News Asianet Suvarna News

Accident ಬಸ್‌ನಲ್ಲಿ ಗಾಯಾಳುಗಳನ್ನ ಆಸ್ಪತ್ರೆಗೆ ಕರೆದುಕೊಂಡ ಹೋದ ರಾಜುಗೌಡ, ಹಲವರ ಜೀವ ಉಳಿಯಿತು

ಸುರಪುರ ಶಾಸಕ ರಾಜುಗೌಡ ಅವರ ಸಮಯಪ್ರಜ್ಞೆಯಿಂದ ಹಲವರ ಕೂಲಿ ಕಾರ್ಮಿಕರ ಜೀವ ಉಳಿದಿದೆ.ಹೌದು..ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದ ಕೂಲಿ ಕಾರ್ಮಿಕರನ್ನ  ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. 

ಯಾದಗಿರಿ, (ಜ.29): ಸುರಪುರ ಶಾಸಕ ರಾಜುಗೌಡ ಅವರ ಸಮಯಪ್ರಜ್ಞೆಯಿಂದ ಹಲವರ ಕೂಲಿ ಕಾರ್ಮಿಕರ ಜೀವ ಉಳಿದಿದೆ. ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದ ಕೂಲಿ ಕಾರ್ಮಿಕರನ್ನ  ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.

ಅಂಬುಲೆನ್ಸ್ ಸರಿಯಾದ ಸಮಯಕ್ಕೆ ಬರದಿದ್ದಕ್ಕೆ ಖುದ್ದು ತಾವೇ ಕೆಎಸ್ಆರ್‌ಟಿಸಿ ಬಸ್‌ನಲ್ಲೇ ಗಾಯಾಳುಗಳನ್ನ ಆಸ್ಪತ್ರೆಗೆ ಕರೆತಂದು ಜೀವ ಕಾಪಾಡಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.