Bengaluru Rain Updates: ವರುಣನ ಅಬ್ಬರಕ್ಕೆ ರಾಜಧಾನಿ ತತ್ತರ, ಜನರ ಬದುಕು ದುಸ್ತರ!
ಮಹಾಮಳೆ ರಾಜಧಾನಿಯಲ್ಲಿ ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲಾ. ಸುಳಿವೇ ಕೊಡದೇ ಬಿದ್ದ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ.
ಬೆಂಗಳೂರು (ಮೇ 19): ರಾಜ್ಯ ರಾಜಧಾನಿ ಬೆಂಗಳೂರು ಮಳೆಯ (Bengaluru Rains) ಅಬ್ಬರಕ್ಕೆ ಅಕ್ಷರಃ ಬೆದರಿ ಬಿದ್ದಿದೆ. ಮಂಗಳವಾರ ಹಾಗೂ ಬುಧವಾರ ಸುರಿದ ಮಳೆಯ ಆರ್ಭಟ ಇನ್ನೊಂದು ಮಳೆ ಬಂದ್ರೆ ಏನು ಕಥೆ ಅನ್ನೋ ಭಯವನ್ನ ಸೃಷ್ಟಿ ಮಾಡಿದೆ. ಮಹಾಮಳೆ ರಾಜಧಾನಿಯಲ್ಲಿ ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲಾ. ಸುಳಿವೇ ಕೊಡದೇ ಬಿದ್ದ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಜನರೆಲ್ಲಾ ಮಳೆಯ ಜೊತೆಗೆ ಪ್ರತಿನಿಧಿಗಳೀಗೂ ಹಿಡಿಶಾಪವನ್ನ ಹಾಕಿದ್ರು.
ಇದನ್ನೂ ಓದಿ: Karnataka Rains: ಕರ್ನಾಟಕದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬೇಸಿಗೆ ಮಳೆ: 3 ಬಲಿ
ಬೆಂಗಳೂರು ಹಿಂದೆಂದೂ ಕಂಡು ಕೇಳರಿಯದ ಮಳೆಗೆ ನಿನ್ನೆ ರಾತ್ರಿ ಸಾಕ್ಷಿಯಾಗಿತ್ತು. ಬೆಂದಕಾಳೂರು ಸಂಪೂರ್ಣವಾಗಿ ನೆಂದಕಾಳೂರಾಗಿತ್ತು. ಕಳೆದೆರಡು ದಿನಗಳಲ್ಲಿ ಬೆಂಗಳೂರಿನ ಮೇಲೆ ಬಿದ್ದಿದ್ದು ರಣ ರಣ ಮಳೆ..ಇತ್ತೀಚಿನ ವರ್ಷಗಳಲ್ಲೇ ಇಂಥ ಮಳೆಯನ್ನ ಮಹಾನಗರಿ ಕಂಡಿರಲಿಲ್ಲ. ಹಾಗಾದ್ರೆ ಮಹಾಮಳೆ ಮಹಾನಗರಿಯನ್ನ ಹೈರಾಣು ಮಾಡಿದ್ದೇಗೆ ಅನ್ನೋದನ್ನ ನೋಡೋಣ.