ಡಿಸಿಪಿ ಶಶಿಕುಮಾರ್ ಮನೆಯಂಗಳದಲ್ಲಿ ಕಿಚನ್ ಗಾರ್ಡನ್ ನೊಡಿ, ನೀವೂ ಟ್ರೈ ಮಾಡಿ
ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಲಾಕ್ಡೌನ್ ಸಂದರ್ಭದಲ್ಲಿ ಕಿಚನ್ ಗಾರ್ಡನ್ ಮೂಲಕ ಗಮನಸೆಳೆದಿದ್ದಾರೆ.
ಬೆಂಗಳೂರು, (ಜುಲೈ, 18): ಕೃಷಿಕರಿಗೆ ಮನೆಯ ಸುತ್ತ-ಮುತ್ತ ಜಾಗ ಇದ್ರೆ ಸಾಕು. ಮನೆಯ ಹಿಂಭಾಗದ ಅಂಗಳದಲ್ಲಿ ಹೂವಿನ ಗಿಡ-ತರಕಾರಿಗಳನ್ನು ಬೆಳೆಯುತ್ತಾರೆ. ಇದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿಯೂ ಹೌದು.
ದೇಸಿ ಕೊರೋನಾ ಲಸಿಕೆ ಮಾಡುತ್ತಾ ಕಮಾಲ್, ದುಬೈನಲ್ಲಿ IPL?ಜು.18ರ ಟಾಪ್ 10 ಸುದ್ದಿ!
ಅದರಂತೆ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಲಾಕ್ಡೌನ್ ಸಂದರ್ಭದಲ್ಲಿ ಕಿಚನ್ ಗಾರ್ಡನ್ ಮೂಲಕ ಗಮನಸೆಳೆದಿದ್ದಾರೆ. ಬಿಡುವು ಸಿಕ್ಕಾಗೆಲ್ಲಾ ಜಕ್ಕೂರಿನ ತಮ್ಮ ಮನೆಯ ಅಂಗಳದಲ್ಲಿ ತರಕಾರಿ ಮತ್ತು ಸೋಪ್ಪು ಬೆಳೆದಿದ್ದು, ಲಾಕ್ ಡೌನ್ ಶುರು ಆದಾಗಿಂದ ತಮ್ಮ ಮನೆಗೆ ಬೇಕಾದ ತರಕಾರಿ ಅವ್ರೆ ಬೆಳ್ಕೊತಿರುವುದು ವಿಶೇಷ.