Asianet Suvarna News Asianet Suvarna News

ಆಹಾರ ಪ್ರಿಯರಿಗೆ ಶಾಕ್: ಅವರೆಕಾಳು ಮೇಳಕ್ಕೆ ಬ್ರೇಕ್!

ಇಬ್ಬರ ವೈಮನಸ್ಸಿನಿಂದ ಅವರೆಕಾಳು ಮೇಳಕ್ಕೆ ಬ್ರೇಕ್| ಕಳೆದ ಬಾರಿ ನಡೆದ ಮೇಳದಲ್ಲಿ ಉಂಟಾಗಿದ್ದ ತ್ಯಾಜ್ಯ ವಿಲೇವಾರಿ ಸಮಸ್ಯೆ|  ಹೀಗಾಗಿ ಈ ಬಾರಿಯ ಮೇಳಕ್ಕೆ ಅನುಮತಿ ನಿರಾಕರಿಸಿದ ಬಿಬಿಎಂಪಿ|  

ಬೆಂಗಳೂರು(ಜ.17): ಇಬ್ಬರ ವೈಮನಸ್ಸಿನಿಂದ ಬೆಂಗಳೂರಿನ ಪ್ರಸಿದ್ಧ ಅವರೆಕಾಳು ಮೇಳಕ್ಕೆ ಬ್ರೇಕ್ ಬಿದ್ದಿದೆ. ಹೌದು, ಅವರೆಕಾಳು ಮೇಳದ ಆಯೋಜಕಿ ಕೆ.ಎಸ್. ಸ್ವಾತಿ ಹಾಗೂ ಬಿಬಿಎಂಪಿ ಸದಸ್ಯೆ ವಾಣಿ ರಾವ್‌ ಅವರ ನಡುವಿನ ವೈಮನಸ್ಸಿನಿಂದ ಅವರೆಕಾಳು ಮೇಳಕ್ಕೆ ಬಿಬಿಎಂಪಿ ಬ್ರೇಕ್ ಹಾಕಿದೆ. ಕಳೆದ ಬಾರಿ ನಡೆದ ಮೇಳದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆಯಾಗಿದ್ದು, ಈ ಬಾರಿ ಮೇಳಕ್ಕೆ ಅನುಮತಿಯನ್ನೇ ನಿರಾಕರಿಸಲಾಗಿದೆ. 

ಹೀಗಾಗಿ ಅವರೆಕಾಳು ಮೇಳ ನಡೆದರೆ ಟ್ರಾಫಿಕ್‌ ಸಮಸ್ಯೆ, ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗ್ಗೆ ಕೆಎಸ್ ಸ್ವಾತಿಗೆ ಬಿಬಿಎಂಪಿ ನೋಟಿಸ್‌ ನೀಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ವಾತಿ ಕಳೆದ ಮೇಳದಲ್ಲಿ ಎರಡೂ ಸಮಸ್ಯೆಗಳನ್ನು ನಾವೇ ಬಗೆಹರಿಸಿದ್ವಿ ಎಂದೂ ಸ್ಪಷ್ಟಪಡಿಸಿದ್ದಾರೆ. ಇವರಿಬ್ಬರ ಜಗಳದಿಂದ ಆಹಾರ ಪ್ರಿಯರು ನಿರಾಶರಾಗಿದ್ದು ಮಾತ್ರ ಸತ್ಯ.