Asianet Suvarna News Asianet Suvarna News

ಆಶ್ರಯ ನೀಡೋ ನೆಪದಲ್ಲಿ BBMP ಅಧಿಕಾರಿಗಳ ಗೋಲ್‌ಮಾಲ್‌: ಕೋಟಿ ಕೋಟಿ ಹಣಕ್ಕೆ ಸಂಚು!

ನಿರಾಶ್ರಿತರಿಗೆ ಆಶ್ರಯ ನೀಡೋ ನೆಪದಲ್ಲಿ ಕೋಟ್ಯಂತರ ರೂ. ಗೋಲ್‌ಮಾಲ್‌| ಕೋಟಿ ಕೋಟಿ ಹಣಕ್ಕಾಗಿ ಸಂಚು ರೂಪಿಸಿದ ಬಿಬಿಎಂಪಿ ಅಧಿಕಾರಿಗಳು| ಬಿಬಿಎಂಪಿ ಅಧಿಕಾರಿಗಳ ಗೋಲ್‌ಮಾಲ್‌ ಬಯಲು ಮಾಡಿದ ಸುವರ್ಣ ನ್ಯೂಸ್‌|

ಬೆಂಗಳೂರು(ಏ.12): ಮಹಾಮಾರಿ ಕೊರೋನಾ ವೈರಸ್‌ಗೆ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ಆದರೆ, ಬಿಬಿಎಂಪಿ ಅಧಿಕಾರಿಗಳಿಂದ ನಿರಾಶ್ರಿತರಿಗೆ ಆಶ್ರಯ ನೀಡೋ ನೆಪದಲ್ಲಿ ಕೋಟ್ಯಂತರ ರೂ. ಗೋಲ್‌ಮಾಲ್‌ ನಡೆದಿದೆ. ಸುಳ್ಳು ಲೆಕ್ಕ ಕೊಟ್ಟು ಸರ್ಕಾರದ ಕೋಟಿ ಕೋಟಿ ಹಣಕ್ಕಾಗಿ ಅಧಿಕಾರಿಗಳು ಸಂಚು ರೂಪಿಸಿದ್ದಾರೆ.

ಕೊರೋನಾ ಪತ್ತೆ ವಿನೂತನ ಅಸ್ತ್ರ, ಬೆಂಗಳೂರಿನ ಜ್ಯೋತಿ ಬ್ರದರ್ಸ್ ಕಮಾಲ್!

ಬಿಬಿಎಂಪಿ ಅಧಿಕಾರಿಗಳ ಗೋಲ್‌ಮಾಲ್‌ ಅನ್ನು ಸುವರ್ಣ ನ್ಯೂಸ್‌ ಬಯಲು ಮಾಡಿದೆ. ಬಿಬಿಎಂಪಿ ಅಧಿಕಾರಿಗಳು 651 ಮಂದಿಗೆ ಆಶ್ರಯ ನೀಡಲಾಗಿದೆ ಎಂದು ಹೇಳಿದ್ದಾರೆ. ಅದರೆ, ಲೆಕ್ಕ ಸಿಕ್ಕಿದ್ದು ಮಾತ್ರ ಕೇವಲ 300 ಮಂದಿಯದ್ದು. ಪಾಲಿಕೆಯ ಪಂಗನಾಮದ ಕಥೆ ಇಲ್ಲಿದೆ ನೋಡಿ.