Asianet Suvarna News Asianet Suvarna News

ಲಾಕ್‌ಡೌನ್‌: ಬಡವರ ಅನ್ನಕ್ಕೂ ಕನ್ನ ಹಾಕಿದ ಖದೀಮರು..!

ಅನಧಿಕೃತ ಗೋದಾಮಿನಲ್ಲಿ ಇಟ್ಟ ಬಡವರಿಗೆ ವಿತರಿಸಬೇಕಾಗಿದ್ದ ಅಕ್ಕಿ| ತಹಶೀಲ್ದಾರ್‌ ನೇತೃತ್ವದಲ್ಲಿ ದಾಳಿ| ಗೋದಾಮಿನಲ್ಲಿದ್ದ 365 ಪ್ಯಾಕೆಟ್‌ ಅಕ್ಕಿ ಚೀಲ ವಶ| 

ಬಳ್ಳಾರಿ(ಏ.19): ಅನ್ನಭಾಗ್ಯ ಪಡಿತರದಡಿಯಲ್ಲಿ ಬಡವರಿಗೆ ನೀಡಬೇಕಾಗಿದ್ದ ಅಕ್ಕಿಯನ್ನ ಖದೀಮರು ಅನಧಿಕೃತ ಗೋದಾಮಿನಲ್ಲಿ ಇಟ್ಟ ಘಟನೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್‌ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. 

ರಸ್ತೆಗಿಳಿದರೆ ಕ್ವಾರಂಟೈನ್‌ನಲ್ಲಿಡುತ್ತೇವೆ; ವಿಜಯಪುರ ಡಿಸಿ ಖಡಕ್ ಆದೇಶ

ಈ ವೇಳೆ ಗೋದಾಮಿನಲ್ಲಿದ್ದ 365 ಪ್ಯಾಕೆಟ್‌ ಅಕ್ಕಿ ಚೀಲಗಳನ್ನ  ವಶ ಪಡಿಸಿಕೊಳ್ಳಲಾಗಿದೆ. ಬಡವರಿಗೆ ಹಂಚಬೇಕಾಗಿದ್ದ ಅಕ್ಕಿಯನ್ನ ಅಕ್ರಮವಾಗಿ ಗೋದಾಮಿನಲ್ಲಿ ಇಡಲಾಗಿತ್ತು. ಹೀಗಾಗಿ ತಾಲೂಡಾಳಿತ ಗೋದಾಮಿನ ಬೀಗವನ್ನ ಒಡೆದು ದಾಳಿ ಮಾಡಿದ್ದಾರೆ. 
 

Video Top Stories