Asianet Suvarna News Asianet Suvarna News

ತನ್ನದೆ ಹೊಲದ ಅಪಾರ ಈರುಳ್ಳಿ ಬೆಳೆ ನಾಶ ಮಾಡಿದ ಬಳ್ಳಾರಿ ರೈತ

ಈರುಳ್ಳಿ ಬೆಳೆಗೆ ವಿಚಿತ್ರ ರೋಗ, ಬೆಳೆ ನಾಶ ಮಾಡಿದ ರೈತ/ ಬಳ್ಳಾರಿ ಜಿಲ್ಲೆಯಲ್ಲಿ ಘಟನೆ/ ತಜ್ಞರ ಸಲಹೆಯಂತೆ ಕ್ರಿಮಿನಾಶಕ ಸಿಂಪಡಣೆ ಮಾಡಿದರೂ ಪ್ರಯೋಜನ ಆಗಲಿಲ್ಲ

ಬಳ್ಳಾರಿ(ಆ. 02)  ಈರುಳ್ಳಿ ಬೆಳೆಗೆ ವಿಚಿತ್ರ ರೋಗ  ಕಂಡು ಬೇಸರಗೊಂಡ ರೈತ ಬೆಳೆ ನಾಶ ಮಾಡಿದ್ದಾರೆ. ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದಡಗಾರನಹಳ್ಳಿಯಲ್ಲಿ  ರೈತರೊಬ್ಬರು ಸಂಪೂರ್ಣ ಬೆಳೆ ನಾಶ ಮಾಡಿದ್ದಾರೆ.

ಕೊರೋನಾ ನಡುವೆ ಕಾಫಿ ಬೆಳೆಗಾರರಿಗೆ ದೊಡ್ಡ ಶಾಕ್

ಟ್ರಾಕ್ಟರ್‌ನಿಂದ ಎರಡು ಎಕರೆ ಈರುಳ್ಳಿ ಬೆಳೆ ನಾಶ ಮಾಡಿದ ರೈತ ಹಾಲೇಶಪ್ಪ ವಿಚಿತ್ರ ಕಾಯಿಲೆಗೆ ಕೃಷಿ ತಜ್ಞರ ಸಲಹೆಯಂತೆ ಹತ್ತಾರು ಔಷಧ ಸಿಂಪಡಣೆ ಮಾಡಿದ್ದರು. ರೋಗ ನಿಯಂತ್ರಣಕ್ಕೆ ಬಾರದ ಕಾರಣ ಬೆಳೆಯನ್ನೇ ನಾಶ ಮಾಡಲಾಗಿದ್ದು ಅಪಾರ ನಷ್ಟವಾಗಿದೆ.