Asianet Suvarna News Asianet Suvarna News

ಇಳಕಲ್ : ಜನಮನ ಸೆಳೆದ ಕೊರೋನಾ ವ್ಯಾಕ್ಸಿನ್ ಗಜಮುಖ

- ಇಲಕಲ್ ಪಟ್ಟಣದಲ್ಲೊಬ್ಬ ಕೊರೋನಾ ವ್ಯಾಕ್ಸಿನ್ ಗಣಪ

- ಕೋವಿಡ್ ಲಸಿಕೆ ಜಾಗೃತಿಗಾಗಿ ವ್ಯಾಕ್ಸಿನ್ ವಿಘ್ನವಿನಾಶಕ

- ವಿಜಯ ಚಿತ್ರಕಲಾ ಕಾಲೇಜ್‌ನಲ್ಲಿ ವ್ಯಾಕ್ಸಿನ್ ಗಣಪತಿ 

 

ಬಾಗಲಕೋಟೆ (ಸೆ. 13):  ಜಿಲ್ಲೆಯ ಇಲಕಲ್ ನಗರದ ವಿಜಯ ಚಿತ್ರಕಲಾ ಮಹಾ ವಿದ್ಯಾಲಯದಲ್ಲಿ ಕಳೆದ 26  ವರ್ಷಗಳಿಂದ ಒಂದಿಲ್ಲೊಂದು ವಿಶೇಷ ರೀತಿಯ ಗಣೇಶನ ಮೂತಿ೯ಯನ್ನು ಪ್ರತಿಷ್ಠಾಪನೆ ಮಾಡುತ್ತ ಬಂದಿದ್ದು,  ಈ ಬಾರಿ ಎಲ್ಲರೂ ಬೆರಗುಗೊಳ್ಳುವ ರೀತಿಯಲ್ಲಿ ವಾಕ್ಸಿನ್‌ ಗಣೇಶನನ್ನು ತಯಾರಿಸಿ ಪ್ರತಿಷ್ಠಾಪಿಸಿದ್ದಾರೆ. 

ಚಿತ್ರಕಲಾ ವಿದ್ಯಾಲಯದ ಪ್ರಾಚಾರ್ಯ ಬಸವರಾಜ್ ಗವಿಮಠ್,ಉಪನ್ಯಾಸಕ ಮೌನೇಶ ಬಡಿಗೇರ ಮಾರ್ಗದರ್ಶನಲ್ಲಿ ಸುಮಾರು 50 ವಿದ್ಯಾರ್ಥಿಗಳು 48 ಗಂಟೆಗಳ ಕಾಲ ಸತತ ಶ್ರಮವಹಿಸಿ ವ್ಯಾಕ್ಸಿನ್ ಗಣೇಶನನ್ನು ತಯಾರಿ ಮಾಡಿ ಪ್ರತಿಷ್ಠಾಪನೆ ಮಾಡಿದ್ದಾರೆ. ಕೋವಿಡ್ ಲಸಿಕೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ವಾಕ್ಸಿನ್ ಗಣಪನನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಸುಮಾರು 1500 ಕ್ಕೂ ಹೆಚ್ಚು ಚುಚ್ಚುಮದ್ದುಗಳು,400 ಕ್ಕೂ ಹೆಚ್ಚು ಔಷಧ ಬಾಟಲಿಗಳ ಬಳಕೆ ಮಾಡಿ ಈ ಗಣೇಶನ್ನು ನಿರ್ಮಿಸಿದ್ದಾರೆ.