Asianet Suvarna News Asianet Suvarna News

ಕಲಬುರಗಿಯಲ್ಲಿ ಕೊರೋನಾಗೆ 2ನೇ ಬಲಿ ತಂದ ಆತಂಕ: ರಸ್ತೆಗಳೆಲ್ಲಾ ಲಾಕ್‌..ಲಾಕ್‌..!

ಕಲಬುರಗಿಯಲ್ಲಿ ಕೊರೋನಾಗೆ ಎರಡನೇ ಬಲಿ| ಜನರಲ್ಲಿ ಹೆಚ್ಚಿದ ಆತಂಕ| ಜನರೇ ಸ್ವಯಂಪ್ರೇರಿತರಾಗಿ ಗಂಗಾನಗರ, ಕೈಲಾಸನಗರದ ರಸ್ತೆಗಳನ್ನ ಬಂದ್‌ ಮಾಡಿದ್ದಾರೆ| ತರಕಾರಿ ಮಾರಾಟಗಾರರರೂ ಬರದಂತೆ ಸಾರ್ವಜನಿಕರ ತಡೆ|

ಕಲಬುರಗಿ(ಏ.09): ನಗರದಲ್ಲಿ ಮಹಾಮಾರಿ ಕೊರೋನಾ ವೈರಸ್‌ಗೆ ಎರಡನೇ ಬಲಿಯಾಗಿದೆ. ಈ ಮೂಲಕ ನಗರದಾದ್ಯಂತ ಆತಂಕ ಮನೆ ಮಾಡಿದೆ. ಸ್ವಯಂ ಪ್ರೇರಣೆಯಿಂದ ಜನರು ರಸ್ತೆಗಳನ್ನ ಲಾಕ್‌ ಮಾಡಿದ್ದಾರೆ. ಭಯದಿಂದ ಜನರು ಮನೆ ಬಿಟ್ಟು ಹೊರಗಡೆ ಬರುತ್ತಿಲ್ಲ. ತರಕಾರಿ ಮಾರಾಟಗಾರರರೂ ಬರದಂತೆ ಸಾರ್ವಜನಿಕರು ತಡೆ ಹಿಡಿದಿದ್ದಾರೆ. 

ಲಾಕ್‌ಡೌನ್‌ ಇದ್ರೂ ಹೇಗಿದೆ ವಿಜಯಪುರ ಪರಿಸ್ಥಿತಿ..?: ಸುವರ್ಣ ನ್ಯೂಸ್‌ ರಿಯಾಲಿಟಿ ಚೆಕ್‌ಗೆ ಶಾಸಕರ ಸಾಥ್‌

ಇದಕ್ಕೂ ಮುನ್ನ ನಗರದ ಜನ ಕೊರೋನಾ ಬಗ್ಗೆ ಯಾವುದೇ ತಲೆ ಕೆಡಿಸಿಕೊಂಡಿರಲಿಲ್ಲ. ಕೊರೋನಾಗೆ ಎರಡನೇ ಬಲಿಯಾಗುತ್ತಿದ್ದಂತೆ ಜನರು ಎಚ್ಚೆತ್ತುಕೊಳ್ಳುವ ಮೂಲಕ ಮನೆಯಲ್ಲಿಯೇ ಇದ್ದಾರೆ. ಹೀಗಾಗಿ ಜನರೇ ಸ್ವಯಂಪ್ರೇರಿತರಾಗಿ ಗಂಗಾನಗರ, ಕೈಲಾಸನಗರದ ರಸ್ತೆಗಳನ್ನ ಬಂದ್‌ ಮಾಡಿದ್ದಾರೆ.