ಮಂಡ್ಯಕ್ಕೆ ಮತ್ತಷ್ಟು ಹೆಚ್ಚಾಗುತ್ತಾ ಕೊರೋನಾ ಆತಂಕ..?
ಕೊರೋನಾ ಕಂಟ್ರೋಲ್ಗೆ ಬರುತ್ತಿದ್ದ ಮಂಡ್ಯ ಜಿಲ್ಲೆಯಲ್ಲಿ ಮತ್ತೆ ಆತಂಕ| ಮುಂಬೈನಲ್ಲಿ ಕೊಡಗಳ್ಳಿ ಗ್ರಾಮದ ಎಂಬ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು| ಡೆತ್ ಸರ್ಟಿಫಿಕೆಟ್ ಇದ್ದರೂ ಶವಸಂಸ್ಕಾರಕ್ಕೆಂದು ಇಲ್ಲಿಗೆ ಕರೆತರಲಾಗಿತ್ತು|ಇಲ್ಲಿ ಅಂತ್ಯ ಸಂಸ್ಕಾರ ಮಾಡಲು ಯಾರು ಅನುಮತಿ ನೀಡಿದ್ದರು ಎಂದು ಪ್ರಶ್ನೆ ಉದ್ಭವ|
ಮಂಡ್ಯ(ಮೇ.01): ಕೊರೋನಾ ಕಂಟ್ರೋಲ್ಗೆ ಬರುತ್ತಿದ್ದ ಜಿಲ್ಲೆಯಲ್ಲಿ ಮತ್ತೆ ಆತಂಕ ಶುರುವಾಗಿದೆ. ಏ.23 ರಂದು ಮುಂಬೈನಲ್ಲಿ ಕೊಡಗಳ್ಳಿ ಗ್ರಾಮದ ಎಂಬ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅಲ್ಲಿ ಡೆತ್ ಸರ್ಟಿಫಿಕೆಟ್ ಇದ್ದರೂ ಶವಸಂಸ್ಕಾರಕ್ಕೆಂದು ಇಲ್ಲಿಗೆ ಕರೆತರಲಾಗಿತ್ತು. ಆದರೆ, ಇಲ್ಲಿ ಅಂತ್ಯ ಸಂಸ್ಕಾರ ಮಾಡಲು ಯಾರು ಅನುಮತಿ ನೀಡಿದ್ದರು ಎಂದು ಪ್ರಶ್ನೆ ಉದ್ಭವವಾಗಿದೆ.
ಸೋಂಕಿತನ ಶವಸಂಸ್ಕಾರದ ವೇಳೆ ಲೋಪ; PPE ಕಿಟ್ಗಳು ಕೆರೆ ಬಳಿ ಪತ್ತೆ
ಮೃತದೇಹನದ ಜೊತೆಗೆ ನಾಲ್ಕು ಮಂದಿ ಆಗಮಿಸಿದ್ದರು. ಇವರನ್ನ ಪರೀಕ್ಷೆ ಮಾಡದೆ ಜಿಲ್ಲೆಯ ಒಳಗಡೆ ಬಿಟ್ರಾ ಅಧಿಕಾರಿಗಳು ಎಂಬ ಚರ್ಚೆ ಆರಂಭವಾಗಿದೆ. ಮುಂಬೈನಿಂದ ಬಂದವರಿಗೆ ಕೊರೋನ ಶಂಕೆ ವ್ಯಕ್ತವಾಗಿದೆ.
"