ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಬಾಲಕ: 4 ದಿನ ಬಳಿಕ ಪ್ರಕರಣ ಬೆಳಕಿಗೆ
ನಗರದ ಹಳೇಗುಡ್ಡದ ಹಳ್ಳಿ ಬಳಿ ರಾಜಕಾಲುವೆಗೆ 5 ವರ್ಷದ ಬಾಲಕನೊಬ್ಬ ಕೊಚ್ಚಿ ಹೋಗಿ ನಾಲ್ಕು ದಿನವಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರು(ಸೆ. 3): ಕಸ ಚೆಲ್ಲಲು ಹೋಗಿದ್ದ 5 ವರ್ಷದ ಬಾಲಕನೋರ್ವ ಕಳೆದ 4 ದಿನಗಳಿಂದ ನಾಪತ್ತೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಅ.30ರ ಬೆಳಗ್ಗೆ ಇಮ್ರಾನ್ ಶರೀಫ್ ಮತ್ತು ಗುಲ್ಶಾನ್ ದಂಪತಿಯ ಪುತ್ರ ಮುಹಮ್ಮದ್ ಝೈನ್ (5) ಕಸ ಚೆಲ್ಲಲು ಹೋಗಿ ಆಯ ತಪ್ಪಿ ರಾಜ ಕಾಲುವೆಗೆ ಬಿದ್ದಿದ್ದಾನೆ. ಆದ್ರೆ ಇದು ಯಾರಿಗೂ ಗೊತ್ತಿಲ್ಲ. ಕೇವಲ ಮನೆಯಿಂದ ಕಾಣೆಯಾಗಿದ್ದಾನೆ ಎಂದು ಮನೆಯವರು ಹುಡುಕಾಟ ನಡೆಸಿದ್ದರು. ಆದ್ರೆ ಇದೀಗ ಬಾಲಕ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾನೆಂದು ಖಚಿತವಾಗಿದ್ದು, ಎನ್ಡಿಆರ್ಎಫ್ ತಂಡ ಶೋಧಕಾರ್ಯ ನಡೆಸಿದೆ.