Asianet Suvarna News Asianet Suvarna News

ಸಂಸತ್ತಿಗೆ ರಾಹುಲ್ ಯಾಕೆ? ಮಲಯಾಳಿಗಳಿಗೆ ಗುಹಾ ತರಾಟೆ!

ಕೇರಳ ಲಿಟರೇಚರ್ ಫೆಸ್ಟ್‌ನಲ್ಲಿ ಭಾಗವಹಿಸಿ ಮಾತನಾಡಿದ ಇತಿಹಾಸಕಾರ ರಾಮಚಂದ್ರ ಗುಹಾ  ರಾಹುಲ್‌ ಗಾಂಧಿಯನ್ನು ಸಂಸತ್ತಿಗೆ ಆಯ್ಕೆ ಮಾಡಿದ್ದು ಯಾಕೆ? ಎಂದು ಮಲಯಾಳಿಗಳಿಗೆ  ಪ್ರಶ್ನಿಸಿದ್ದಾರೆ.
 

ಕಲ್ಲಿಕೋಟೆ (ಜ.18): ಕೇರಳ ಲಿಟರೇಚರ್ ಫೆಸ್ಟ್‌ನಲ್ಲಿ ಭಾಗವಹಿಸಿ ಮಾತನಾಡಿದ ಇತಿಹಾಸಕಾರ ರಾಮಚಂದ್ರ ಗುಹಾ  ರಾಹುಲ್‌ ಗಾಂಧಿಯನ್ನು ಸಂಸತ್ತಿಗೆ ಆಯ್ಕೆ ಮಾಡಿದ್ದು ಯಾಕೆ? ಎಂದು ಮಲಯಾಳಿಗಳಿಗೆ  ಪ್ರಶ್ನಿಸಿದ್ದಾರೆ.

ಯುವಭಾರತಕ್ಕೆ ವಂಶಾಧಿಪತ್ಯ ಬೇಕಿಲ್ಲ, ನಿಮಗ್ಯಾಕೆ ರಾಹುಲ್ ಗಾಂಧಿ ಬೇಕು? ವೈಯುಕ್ತಿಕವಾಗಿ  ರಾಹುಲ್ ಗಾಂಧಿ ವಿರುದ್ಧ ನನಗೆ ಸಿಟ್ಟಿಲ್ಲ. ಅವರು ಸಜ್ಜನ ವ್ಯಕ್ತಿ. ಆದರೆ ಭಾರತಕ್ಕೆ 5ನೇ ಪೀಳಿಗೆಯ ವಂಶಾಡಳಿತ ಬೇಡ, ಎಂದು ಅಭಿಮತ ವ್ಯಕ್ತಪಡಿಸಿದ್ದಾರೆ.

ಇದನ್ನೂ ನೋಡಿ | ಅಧಿಕಾರಕ್ಕಾಗಿ ಎಲ್ಲಾ ಸೈ; ಮತ್ತೆ ಮೈತ್ರಿ ಮಾಡಿಕೊಂಡ ಜೆಡಿಎಸ್- ಕೈ...

ನೀವು 2024ರಲ್ಲೂ ರಾಹುಲ್ ಗಾಂಧಿಯನ್ನು ಆಯ್ಕೆ ಮಾಡಿದರೆ,  ಅದು ನರೇಂದ್ರ ಮೋದಿಗೆ ಸಹಾಯ ಮಾಡಿದಂತೆ. ನರೇಂದ್ರ ಮೋದಿ ರಾಹುಲ್ ಗಾಂಧಿಯಲ್ಲ, ಅದೇ ಅವರ ಬಲ. ನರೇಂದ್ರ ಮೋದಿ ಸ್ವಸಾಮರ್ಥ್ಯದಿಂದ ಹುಟ್ಟಿದ ವ್ಯಕ್ತಿತ್ವ, ಎಂದು ಹೇಳಿದ್ದಾರೆ.  
 

Video Top Stories