Asianet Suvarna News Asianet Suvarna News

ಕೊರೊನಾ ನಡುವೆ ಆಂಧ್ರದಲ್ಲಿ ದಾರುಣ ಘಟನೆ; ನಿಂತಲ್ಲಿ ಕೂತಲ್ಲಿ ಕುಸಿದ ಜನತೆ

ಮಹಾಮಾರಿ ಕೊರೋನಾ ವೈರಸ್‌ ಭಾರತವೂ ಸೇರಿ ವಿಶ್ವದ ಮೂಲೆ ಮೂಲೆಯನ್ನು ತಲ್ಲಣಗೊಳಿಸಿದ್ದರೆ, ಆಂಧ್ರದಲ್ಲಿ ಅನೂಹ್ಯವಾದ ಘೋರ ದುರಂತ ಸಂಭವಿಸಿದೆ. 

ಬೆಂಗಳೂರು (ಮೇ. 08): ಮಹಾಮಾರಿ ಕೊರೋನಾ ವೈರಸ್‌ ಭಾರತವೂ ಸೇರಿ ವಿಶ್ವದ ಮೂಲೆ ಮೂಲೆಯನ್ನು ತಲ್ಲಣಗೊಳಿಸಿದ್ದರೆ, ಆಂಧ್ರದಲ್ಲಿ ಅನೂಹ್ಯವಾದ ಘೋರ ದುರಂತ ಸಂಭವಿಸಿದೆ.

ವಿಶಾಖಪಟ್ಟಣ ಬಳಿಯ ರಾಸಾಯನಿಕ ಕಾರ್ಖಾನೆಯಿಂದ ಭಾರೀ ವಿಷಾನಿಲ ಸೋರಿಕೆಯಾಗಿ 5 ಕಿ.ಮೀ. ಪ್ರದೇಶದಲ್ಲಿ ಹಬ್ಬಿದ್ದರಿಂದ 11 ಮಂದಿ ಸಾವಿಗೀಡಾಗಿ, 1000ಕ್ಕೂ ಹೆಚ್ಚು ಮಂದಿ ತೀವ್ರ ಅಸ್ವಸ್ಥರಾದ ಹೃದಯ ವಿದ್ರಾವಕ ದುರ್ಘಟನೆ ಗುರುವಾರದ ಕರಾಳ ನಸುಕಿನಲ್ಲಿ ಸಂಭವಿಸಿದೆ.

ವಿಶಾಖಪಟ್ಟಣಂ ಗ್ಯಾಸ್ ಲೀಕ್; 100ಕ್ಕೂ ಹೆಚ್ಚು ಜೀವ ಉಳಿಸಿದ ಪೊಲೀಸ್ ಸಾಹಸವೇ ರೋಚಕ!

36 ವರ್ಷಗಳ ಹಿಂದೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ 3500ಕ್ಕೂ ಹೆಚ್ಚು ಬಲಿ ಪಡೆದಿದ್ದ ವಿಶ್ವದ ಘನಘೋರ ಅನಿಲ ದುರಂತವನ್ನು ನೆನಪಿಸುವಂತಹ ಘಟನೆ ಇದಾಗಿದ್ದು, ಇಡೀ ದೇಶವನ್ನೇ ತಲ್ಲಣಗೊಳಿಸಿದೆ.

Video Top Stories