Asianet Suvarna News Asianet Suvarna News

ರೆಡ್ಡಿಗೆ ರಿಲೀಫ್, ಕುಲಕರ್ಣಿಗೆ ಬೇಲ್. ಹಬ್ಬದ ಭರಾಟೆ ಕೊರೋನಾ ರೂಲ್ಸ್ ಬ್ರೇಕ್ ಫೇಲ್!

* ಜನಾರ್ದನ ರೆಡ್ಡಿ ಬಳ್ಳಾರಿಗೆ ಬರಬಹುದು..ಸ್ನೇಹಿತರ ಸಂತಸ
* ಹೆದ್ದಾರಿ ಗಲಾಟೆ.. ಸುಮಲತಾ ವರ್ಸಸ್ ಪ್ರತಾಪ್ ಸಿಂಹ
*ನಂದಿನಿಯಿಂದ ಗ್ರಾಹಕರಿಗೆ ಬಗೆಬಗೆಯ ಸಿಹಿ..
* ಜನಾಶೀರ್ವಾದ ಯಾತ್ರೆಗೆ ಕರ್ನಾಟಕದಲ್ಲಿ ತೆರೆ

ಬೆಂಗಳೂರು(ಆ.19) ಗಾಲಿ ಜನಾರ್ದನ ರೆಡ್ಡಿ ಅವರು ಬಳ್ಳಾರಿಗೆ ಪ್ರವೇಶ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದ್ದು ಬಿಗ್ ರಿಲೀಫ್ ಸಿಕ್ಕಿದೆ.  ಇನ್ನೊಂದು ಕಡೆ ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಅವರಿಗೂ ಜಾಮೀನು ಸಿಕ್ಕಿದೆ. ಕೆಆರ್ ಎಎಸ್ ಗೊಂದಲ ಒಂದು ಕಡೆ ಹಾಗೆ ಇರುವಾಗಲೇ ಈಗ ಹೆದ್ದಾರಿ ವಿಚಾರದಲ್ಲಿ ರಾಜಕಾರಣಿಗಳ ನಡುವೆ ಮಾತಾಗಿದೆ. ಮಂಡ್ಯ ಸಂಸದೆ ಸುಮಲತಾ ಮತ್ತು ಮೈಸೂರು ಸಂಸದ ಪ್ರತಾಪ್ ಸಿಂಹ  ಕೌಂಟರ್ ಕೊಟ್ಟುಕೊಂಡಿದ್ದಾರೆ.

ಪಂಚ ಸಿಂಹಗಳ ನಾಡಲ್ಲಿ ತಾಲೀಬಾನಿಗಳ ಆಟ ನಡೆಯಲ್ಲ

ಕೊರೋನಾ ಕಂಟ್ರೋಲ್ ನಲ್ಲಿ ಇದೆ ಎಂಬ ಕಾರಣಕ್ಕೆ ಜನರ ಹಬ್ಬದ ಖರೀದಿ ಸಂಭ್ರಮ ಜೋರಾಗಿತ್ತು.  ಸಾಮಾಜಿಕ ಅಂತರ ಹಾಗಂದ್ರೆ ಏನು?  ಎಂಬಂತೆ ಜನ ಓಡಾಡಿಕೊಂಡಿದ್ದರು. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ