ಮತಾಂತರಕ್ಕೆ ಮೂಲ ಕಾರಣ ಏನು? ಸದನದಲ್ಲಿ ಕೋಲಾಹಲ
* ವಿಧಾನಸಭೆಯಲ್ಲಿ ಮತಾಂತರದ ಸದ್ದು..ವಾಕ್ ಸಮರ
*ಸದನದಲ್ಲಿ ಸದ್ದು ಮಾಡಿದ ಕವರ್ ಸ್ಟೋರಿ!
* ಅಧಿಕಾರಕ್ಕಾಗಿ ಕಿತ್ತಾಟ.. ತಾಲೀಬಾನಿ ನಾಯಕನೇ ಹತ್ಯೆ?
* ಕೊರೋನಾ ಪರಿಸ್ಥಿತಿ ನಿಯಂತ್ರಣದಲ್ಲಿ
ಬೆಂಗಳೂರು(ಸೆ. 21) ಶಾಸಕ ಗೂಳಿಹಟ್ಟಿ ಶೇಖರ್ ಮತಾಂತರದ ವಿಚಾರವನ್ನು ಸದನದಲ್ಲಿ ಪ್ರಸ್ತಾಪ ಮಾಡಿದರು. ಇದು ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು.ಶಾಸಕ ಗೂಳಿಹಟ್ಟಿ ಶೇಖರ್ ಸುವರ್ಣ ನ್ಯೂಸ್ ಕವ್ ಸ್ಟೋರಿ ಪ್ರಸ್ತಾಪ ಮಾಡಿ ಮಾತನಾಡಿದರು. ನನ್ನ ಹೆತ್ತ ತಾಯಿಯೇ ಮತಾಂತರ ಆಗಿದ್ದಾರೆ' ಎಂದು ಶಾಸಕ ಗೂಳಿಹಟ್ಟಿ ಶೇಖರ್ ವಿಧಾನಸಭೆಯಲ್ಲಿ ನೋವು ತೋಡಿಕೊಂಡರು. ಏಷ್ಯಾನೆಟ್ ಸುವರ್ಣ ನ್ಯೂಸ್ ಕವರ್ ಸ್ಟೋರಿ ವರದಿ ಪ್ರಸ್ತಾಪಿಸಿ ಮತಾಂತರ ವಿರುದ್ಧ ಕ್ರಮಕ್ಕೆ ಬಿಜೆಪಿ ಶಾಸಕರು ಆಗ್ರಹಿಸಿದರು.
ಸಾಟಲೈಟ್ ಪೋನ್ ಸೌಂಡ್ ... ಪೊಲೀಸರಿಗೆ ಆರಗ ನಿರ್ದೇಶನ
ಏನೂ ಅರಿಯದ ಎರಡು ವರ್ಷದ ಮಗುವೊಂದು ಅಚಾನಕ್ ಆಗಿ ದೇವಾಲಯ ಪ್ರವೇಶ ಮಾಡಿದ್ದಕ್ಕೆ ಹೆತ್ತವರಿಗೆ ದಂಡ ಹಾಗೂ ದೇವಸ್ಥಾನದಲ್ಲಿ ಕೈಕೊಳ್ಳಬೇಕಿರುವ ಶುದ್ಧಿಕಾರ್ಯಗಳಿಗೆ ತಗಲುವ ವೆಚ್ಚ ನೀಡುವಂತೆ ತೀರ್ಪು ನೀಡಲಾದ ಸುದ್ದಿಯೂ ಬಂದಿದೆ. ಅಪ್ಘಾನಿಸ್ತಾನದಲ್ಲಿ ಗೊಂದಲಗಳು ಮುಂದುವರಿದೆ ಇದೆ. ತಾಲೀಬಾನಿ ನಾಯಕನೇ ಹತ್ಯೆಯಾಗಿದ್ದಾನೆ ಎನ್ನುವ ಮಾಹಿತಿ ಬಂದಿದೆ.