ಗಣೇಶ ಹಬ್ಬ ಮಾಡೋದು ಹೇಗೆ? BSY-ಶೆಟ್ಟರ್ ಭೇಟಿ ಧಗೆ!
* ಸಭೆಗೆ ಅಭಿಮಾನಿಗಳು ಬರ್ತಾರೆ.. ಗಣೇಶ ಹಬ್ಬಕ್ಕೆ.. ಏನಂತೀರಿ ಮಂತ್ರಿಗಳೆ!
* ಗಣೇಶ ಹಬ್ಬ ಆಚರಣೆ ಸಂಬಂಧ ಇನ್ನೂ ಹೊರಬಾರದ ಸುತ್ತೋಲೆ
*ಬಿಎಸ್ವೈ ಮತ್ತು ಶೆಟ್ಟರ್ ಭೇಟಿ.. ಹೊಸ ರಾಜಕಾರಣದ ದಿಕ್ಸೂಚಿ..
*ಅಫ್ಘನ್ ಜಿಹಾದಿ ಯುನಿವರ್ಸಿಟಿ ತಯಾರಿಸಿದ ಉಗ್ರರ ಲೆಕ್ಕ!
ಬೆಂಗಳೂರು(ಸೆ. 04) ಕೊರೋನಾವನ್ನು ಗಂಭೀರವಾಗಿ ಪರಿಗಣಿಸಿದ್ದು ಸರ್ಕಾರ ಗಣೇಶ ಹಬ್ಬ ಆಚರಣೆ ಸಂಬಂಧ ಇನ್ನೂ ಮಾರ್ಗಸೂಚಿ ಹೊರಡಿಸಿಲ್ಲ. ಜನಾಶೀರ್ವಾದ ಯಾತ್ರೆಗೆ, ಚುನಾವಣೆ ಒಕೆ ಎನ್ನುವ ಸರ್ಕಾರ ಇದಕ್ಕೆ ಮಾತ್ರೆ ಯಾಕೆ ಅಡ್ಡಿ ಮಾಡುತ್ತಿದೆ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.
ಗಣೇಶ ವಿಗ್ರಹದ ಅಳತೆಗೂ, ಕೊರೋನಾಕ್ಕೂ ಏನ್ ಸಂಬಂಧ? ತಯಾರಕರ ಗೋಳು
ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿ ಮಹತ್ವದ ಬೆಳವಣಿಗೆ ಒಂದು ಆಗಿದೆ. ಎಲ್ಲರೂ ಒಟ್ಟಿಗೆ ಸೇರಿ ಮುಂದಿನ ಚುನಾವಣೆ ಎದುರಿಸುತ್ತೇವೆ ಎನ್ನುತ್ತಿದ್ದಾರೆ ಬಿಜೆಪಿ ನಾಯಕರು. ಈ ನಡುವೆ ಮಾಜಿ ಸಿಎಂಗಳಾದ ಬಿಎಸ್ವೈ ಮತ್ತು ಶೆಟ್ಟರ್ ಪರಸ್ಪರ ಭೇಟಿಯಾಗಿದ್ದಾರೆ.ಅಫ್ಘನ್ ನಲ್ಲಿ ತಾಲೀಬಾನಿಗಳಿಗೆ ಸರ್ಕಾರ ರಚನೆ ಮಾಡಲು ಆಗುತ್ತಿಲ್ಲ..ಇದಕ್ಕೆ ಕಾರಣ ಏನು? ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ!