Asianet Suvarna News Asianet Suvarna News

6 ರಿಂದ 8ನೇ ತರಗತಿ ಓಪನ್ ಫಿಕ್ಸ್.. BSY ಪ್ರವಾಸಕ್ಕೆ ಹೈಕಮಾಂಡ್ ಬ್ರೇಕ್!

*  6 ರಿಂದ 8ನೇ ತರಗತಿ ಪ್ರಾರಂಭಕ್ಕೆ ದಿನಾಂಕ ಫಿಕ್ಸ್
* ಗಣೇಶ ಹಬ್ಬಕ್ಕೆ ಸಂಬಂಧಿಸಿ ಹೊರಬರದ ತೀರ್ಮಾನ
* ಸಚಿವ ಶ್ರೀರಾಮುಲು ಹೆಸರಿನಲ್ಲಿ ವಂಚನೆ,  ಆಪ್ತನ ಬಂಧನ
* ಯಡಿಯೂರಪ್ಪ ಪ್ರವಾಸಕ್ಕೆ ಬ್ರೇಕ್.. ಹೈಕಮಾಂಡ್ ಒಪ್ಪಿಗೆಯೇ ಇಲ್ಲ!

ಬೆಂಗಳೂರು(ಆ. 30)   ರಾಜ್ಯಾದ್ಯಂತ 9ರಿಂದ 12 ತರಗತಿಗಳು ಪ್ರಾರಂಭವಾಗಿದ್ದು, ಇದೀಗ 6ರಿಂದ 8ನೇ ತರಗತಿಗಳನ್ನೂ ಸಹ ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಕೊವೀಡ್ ಮೂರನೇ ಅಲೆಯ ಉನ್ನತ ಮಟ್ಟದ ಸಮಿತಿಯಲ್ಲಿ  ತೀರ್ಮಾನಿಸಲಾಗಿದ್ದು, ಪಾಸಿಟಿವಿಟಿ ದರ ಶೇಕಡ 2ಕ್ಕಿಂತ  ಕಡಿಮೆ ಇರುವ ತಾಲ್ಲೂಕುಗಳಲ್ಲಿ ಪ್ಟೆಂಬರ್ 6 ರಿಂದಲೇ  6ರಿಂದ 8ನೇ ತರಗತಿಗಳನ್ನು ಕೋವಿಡ್ ಮಾರ್ಗಸೂಚಿ ಅನುಸರಿಸಿ ಆರಂಭಿಸಲು ನಿರ್ಧರಿಸಲಾಗಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಕಡೆ ಬಂಡಾಯದ ಬಿಸಿ

ಸಾರಿಗೆ ಸಚಿವ ಶ್ರೀರಾಮುಲು ಹೆಸರಿನಲ್ಲಿ ವಂಚನೆ ನಡೆಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.ರಾಜೀನಾಮೆ ನೀಡುವ ದಿನವೇ ಬಿಎಸ್ ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡುತ್ತೇನೆ ಎಂದಿದ್ದರು. ಆದರೆ ಪಕ್ಷದೊಳಗೆ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ