Asianet Suvarna News Asianet Suvarna News

ಒಂದು ಕೈಯ್ಯಲ್ಲಿ ರೈಫಲ್, ಮತ್ತೊಂದರಲ್ಲಿ ಹಾಲು: ಅಣ್ಣಾ ನೀನೇ ನಿಜವಾದ ಹೀರೋ!

ಶ್ರಮಿಕ್ ರೈಲಿನಲ್ಲಿ ಸಂಚರಿಸುವಾಗ ನಾಲ್ಕು ತಿಂಗಳ ಮುದ್ದು ಕಂದ ಅಳ್ತಿದ್ದ. ಹೀಗಿರುವಾಗ ತಾಯಿಗೆ ಏನು ಮಾಡೋದೆಂದು ತಿಳಿಯದೆ ಕಂಗಾಲಾಗಿ ಪರದಾಡುತ್ತಿದ್ದಾಗ ನೆರವಿಗೆ ಧಾವಿಸಿದ್ದು ಆರ್‌ಪಿಎಫ್‌‌ ಕಾನ್ಸಟೇಬಲ್ ಇಂದ್ರಕುಮಾರ್.

ಭೋಪಾಲ್(ಜೂ.04): ಶ್ರಮಿಕ್ ರೈಲಿನಲ್ಲಿ ಸಂಚರಿಸುವಾಗ ನಾಲ್ಕು ತಿಂಗಳ ಮುದ್ದು ಕಂದ ಅಳ್ತಿದ್ದ. ಹೀಗಿರುವಾಗ ತಾಯಿಗೆ ಏನು ಮಾಡೋದೆಂದು ತಿಳಿಯದೆ ಕಂಗಾಲಾಗಿ ಪರದಾಡುತ್ತಿದ್ದಾಗ ನೆರವಿಗೆ ಧಾವಿಸಿದ್ದು ಆರ್‌ಪಿಎಫ್‌‌ ಕಾನ್ಸಟೇಬಲ್ ಇಂದ್ರಕುಮಾರ್.

ಮಗುವಿನ ಅಳು ನಿಲ್ಲದಿರುವುದನ್ನು ಗಮನಿಸಿದ ಸಿಬ್ಬಂದಿ ನಿಲ್ದಾಣದಲ್ಲೇ ಇದ್ದ ಅಂಗಡಿಗೆ ಹಾಲು ತರಲು ತೆರಳಿದ್ದಾರೆ. ಆದ್ರೆ ಆತ ಮರಳುವಷ್ಟರಲ್ಲಿ ರೈಲು ಹೊರಡಲಾರಂಭಿಸಿದೆ. ಹೀಗಿರುವಾಗ ಅವರು ಒಂದು ಕೈಯ್ಯಲ್ಲಿ ರೈಫಲ್ ಹಾಗೂ ಮತ್ತೊಂದರಲ್ಲಿ ಹಾಲು ಹಿಡಿದು ಓಡೋಡಿ ಬಂದು ಮಗುವಿನ ಕೈಗೆ ಹಾಲಿನ ಪ್ಯಾಕೇಟ್ ತಲುಪಿಸಿದ್ದಾರೆ.

ಭೋಪಾಲ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ರೈಲು ನಿನ್ನೆ ಗೋರಖ್‌ಪುರ ತಲುಪಿದೆ. ಸದ್ಯ ಮಗುವಿನ ತಾಯಿ ಸೋಫಿಯಾ ವಿಡಿಯೋ ಮಾಡಿ ಸಿಬ್ಬಂದಿಗೆ ಧನ್ಯವಾದ ಸಲ್ಲಿಸಿದ್ದಾರೆ. ಅಣ್ಣಾ ನೀವೇ ನಿಜವಾದ ಹೀರೋ ಎಂದಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ. ಸಿಬ್ಬಂದಿಯ ಹೃದಯವಂತಿಕೆಗೆ ನೆಟ್ಟಿಗರು ಸಲಾಂ ಎಂದಿದ್ದಾರೆ.