'ಅಮರ್ ರಹೇ.. ಕರ್ನಲ್ ಸಂತೋಷ್': ಹುತಾತ್ಮ ಯೋಧನ ಅಂತ್ಯಕ್ರಿಯೆ
ತೆಲಂಗಾಣದ ಸೂರ್ಯಪೇಟೆ ನಗರದಲ್ಲಿ ನಡೆದ ಕರ್ನಲ್ ಸಂತೋಷ್ ವೀರಯೋಧನ ಅಂತ್ಯಕ್ರಿಯೆ|ಸರ್ಕಾರಿ ಗೌರವಗಳೊಂದಿಗೆ ವೀರಯೋಧ ಅಂತ್ಯಕ್ರಿಯೆ| ಚೀನಾ ಸಂಘರ್ಷದಲ್ಲಿ ಕರ್ನಲ್ ಸಂತೋಷ್ ಹುತಾತ್ಮ|
ಹೈದ್ರಾಬಾದ್(ಜೂ.18): ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರಯೋಧ ಕರ್ನಲ್ ಸಂತೋಷ್ ಅವರ ಅಂತ್ಯಕ್ರಿಯೆ ಇಂದು(ಗುರುವಾರ) ತೆಲಂಗಾಣದ ಸೂರ್ಯಪೇಟೆ ನಗರದಲ್ಲಿ ನೆರವೇರಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ವೀರಯೋಧ ಅಂತ್ಯಕ್ರಿಯೆ ನಡೆದಿದೆ.
ಚೀನೀ ರಕ್ಕಸ ದಾಳಿಗೆ ಸಿಕ್ತು ಸಾಕ್ಷ್ಯ!
ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಜನರು ದೇಶಕ್ಕಾಗಿ ಬಲಿದಾನ ಮಾಡಿದ ಕರ್ನಲ್ ಸಂತೋಷ್ ಅವರ ಅಂತಿಮ ದರ್ಶನವನ್ನ ಪಡೆದುಕೊಂಡಿದ್ದಾರೆ. ಚೀನಾ ಸಂಘರ್ಷದಲ್ಲಿ ಕರ್ನಲ್ ಸಂತೋಷ್ ಅವರು ವೀರಮರಣವನ್ನಪ್ಪಿದ್ದರು.