Asianet Suvarna News Asianet Suvarna News

ಮಂಗಳೂರಲ್ಲಿ ಆತ್ಮಾಹುತಿ ದಾಳಿ ಪ್ರಕರಣ, ಸ್ಫೋಟದ ಹಿಂದಿನ ಭಯಾನಕ ಮಾಹಿತಿ ಬಹಿರಂಗ!

ಶಂಕಿತ ಉಗ್ರ ಮತೀನ್ ತಂದೆ ಸುವರ್ಣನ್ಯೂಸ್‌ಗೆ ಪ್ರತಿಕ್ರಿಯೆ, ಮಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣದ ಮಾಸ್ಟರ್ ಮೈಂಡ್ ಮತೀನ್, ಆರ್‌ಎಸ್‌ಎಸ್ ಸಂಘನಿಕೇತನ್ ಕಾರ್ಯಕ್ರಮ ಟಾರ್ಗೆಟ್ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

ದಕ್ಷಿಣ ಭಾರತದಲ್ಲಿ ಉಗ್ರರು ಭಾರಿ ವಿದ್ವಂಸಕ್ಕೆ ಕೃತ್ಯಕ್ಕೆ ಸಂಚು ಮಾಡಿರುವುದು ಸ್ಪಷ್ಟವಾಗುತ್ತಿದೆ. ಮಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣದ ಹಿಂದೆ ಶಿವಮೊಗ್ಗದಲ್ಲಿ ನಡೆದ ವೀರ್ ಸಾವರ್ಕರ್ ಫ್ಲೆಕ್ಸ್ ಗಲಾಟೆಗೂ ನಂಟಿದೆ. ಇಷ್ಟೇ ಅಲ್ಲ ಮಂಗಳೂರಿನಲ್ಲಿ ಪತ್ತೆಯಾದ ಲಷ್ಕರ್ ಅಹಮ್ಮದ್ ಗೋಡೆ ಬರಹ ಪ್ರಕರಣದ ನಂಟಿದೆ. ಈ ಪ್ರಕರಣ ಇಷ್ಟಕ್ಕೆ ಸೀಮಿತವಾಗುತ್ತಿಲ್ಲ. ಐಸಿಸ್ ಉಗ್ರರ ಜೊತೆಗಿನ ನಂಟು ಹೊಂದಿರುವ ಆರೋಪಿ, ತಾರೀಖ್ ಮಂಗಳೂರು ಬ್ಲಾಸ್ಟ್ ಪ್ರಕರಣದಲ್ಲಿ ಬಂಧಿತನಾಗಿದ್ದಾನೆ. ಕೊಯಮತ್ತೂರು ಸ್ಫೋಟ ಹಾಗೂ ಮಂಗಳೂರು ಬ್ಲಾಸ್ಟ್ ಪ್ರಕರಣಕ್ಕೂ ಲಿಂಕ್ ಇದೆ. ಕೊಯಮತ್ತೂರು ಸ್ಫೋಟದಲ್ಲಿ ಸತ್ತ ಮುಬೀನ್ ಭೇಟಿಯಾಗಿರುವುದು ಬೆಳಕಿಕೆ ಬಂದಿದೆ. ಬೆಂಗಳೂರಿನಲ್ಲಿ ಭೇಟಿಯಾದ ಬಳಿಕ ಶಿವಮೊಗ್ಗ ಹಾಗೂ ಬಂಟ್ವಾಳದಲ್ಲಿ ಶಾರೀಖ್ ಟ್ರಯಲ್ ಬ್ಲಾಸ್ಟ್ ಮಾಡಿ ಯಶಸ್ವಿಯಾಗಿದ್ದ. ಆದರೆ ಇಬ್ಬರು ಪ್ಲಾನ್ ಅದೃಷ್ಠವಶಾತ್ ವರ್ಕೌಟ್ ಆಗಿಲ್ಲ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

Video Top Stories