Asianet Suvarna News Asianet Suvarna News

ಕೊರೋನಾ ಸಂಹಾರಕ್ಕೆ ಕನ್ನಡಿಗ; 10 ವಿಜ್ಞಾನಿಗಳ ತಂಡದಲ್ಲಿ ಹಾಸನದ ಹುಡುಗ

ಕೊರೋನ‌ ವೈರಸ್ ಗೆ ಔಷಧ ಕಂಡು ಹಿಡಯುವ ಯತ್ನ ಪ್ರಗತಿಯಲ್ಲಿದೆ. ವ್ಯಾಕ್ಸಿನ್ ಕಂಡುಹಿಡಿಯಲು ತಂಡ ರಚನೆ ಮಾಡಲಾಗಿದ್ದು, ತಂಡದಲ್ಲಿ‌ ಹಾಸನ ಮೂಲದ ಕನ್ನಡಿಗರೊಬ್ಬರು ಸ್ಥಾನ ಪಡೆದಿದ್ದಾರೆ. 
 

ಬೆಂಗಳೂರು (ಮಾ.16): ಯುರೋಪ್ ರಾಷ್ಟ್ರಗಳು ಒಗ್ಗೂಡಿ ಕೊರೋನ ವ್ಯಾಕ್ಸಿನ್ ಕಂಡು ಹಿಡಿಯಲು ಹತ್ತು ತಂಡ ರಚಿಸಿದ್ದು ಈ ತಂಡದಲ್ಲಿ ಕನ್ನಡಿಗ ವಿಜ್ಞಾನಿಯೊಬ್ಬರು ಸ್ಥಾನ ಪಡೆದುಕೊಂಡಿದ್ದಾರೆ. 

ಇದನ್ನೂ ನೋಡಿ | ಕರೋನಾ ತಡೆಗೆ ರಾಜ್ಯ ಸರ್ಕಾರದ ದಿಟ್ಟ ಕ್ರಮ, ಅದ್ಭುತ ಐಡಿಯಾ...

ಕೊರೋನ‌ ವೈರಸ್ ಗೆ ಔಷಧ ಕಂಡು ಹಿಡಯುವ ಯತ್ನ ಪ್ರಗತಿಯಲ್ಲಿದೆ. ವ್ಯಾಕ್ಸಿನ್ ಕಂಡುಹಿಡಿಯಲು ತಂಡ ರಚನೆ ಮಾಡಲಾಗಿದ್ದು, ತಂಡದಲ್ಲಿ‌ ಹಾಸನ ಮೂಲದ ಮಹದೇಶ್ ಪ್ರಸಾದ್ ಕೂಡಾ ಇದ್ದಾರೆ.

ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನವರಾದ ಮಹದೇಶ ಪ್ರಸಾದ್  ಜರ್ಮನಿಯಲ್ಲಿ ವಿಜ್ಞಾನಿಯಾಗಿದ್ದು, ಕಳೆದ ಒಂದು ವರ್ಷದಿಂದ ಸಂಶೋಧನೆ ಸಲುವಾಗಿ ಬೆಲ್ಜಿಯಂನಲ್ಲಿ ನೆಲೆಸಿದ್ದಾರೆ.

ಮಹದೇಶ್ ಪ್ರಸಾದ್‌ ಅಮ್ಮನ ಮಾತು...

"
 


 

Video Top Stories