Asianet Suvarna News Asianet Suvarna News

ಪಿಒಕೆ ಹಿಡಿತಕ್ಕೆ ಭಾರತ ರಣತಂತ್ರ; ಸುವರ್ಣ ನ್ಯೂಸ್‌ನಲ್ಲಿ ಪಿಒಕೆ ಹವಾಮಾನ ಮುನ್ಸೂಚನೆ ಪ್ರಸಾರ

ಅಂತರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನದ ಮಾನವನ್ನು ಭಾರತ ಆಗಾಗ ಹರಾಜು ಹಾಕುತ್ತಿರುತ್ತದೆ. ಆದರೆ ಪಾಕ್ ಮಾತ್ರ ಬುದ್ದಿ ಕಲಿತಿಲ್ಲ. ಭಾರತ ಪಾಕ್ ಆಕ್ರಮಿತ ಕಾಶ್ಮೀರದ ಹವಾಮಾನ ವರದಿ ನೀಡುವ ಮೂಲಕ ಅಂತಾರಷ್ಟ್ರೀಯ ಮಟ್ಟದಲ್ಲಿ ಪಾಕ್‌ಗೆ ಮುಜುಗರ ತಂದಿಟ್ಟಿದೆ. 

ಬೆಂಗಳೂರು (ಮೇ. 10): ಅಂತರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನದ ಮಾನವನ್ನು ಭಾರತ ಆಗಾಗ ಹರಾಜು ಹಾಕುತ್ತಿರುತ್ತದೆ. ಆದರೆ ಪಾಕ್ ಮಾತ್ರ ಬುದ್ದಿ ಕಲಿತಿಲ್ಲ. ಭಾರತ ಪಾಕ್ ಆಕ್ರಮಿತ ಕಾಶ್ಮೀರದ ಹವಾಮಾನ ವರದಿ ನೀಡುವ ಮೂಲಕ ಅಂತಾರಷ್ಟ್ರೀಯ ಮಟ್ಟದಲ್ಲಿ ಪಾಕ್‌ಗೆ ಮುಜುಗರ ತಂದಿಟ್ಟಿದೆ. 

ಪಿಒಕೆ ಹಿಡಿತಕ್ಕೆ ಭಾರತ ರಣತಂತ್ರ, ಹವಾಮಾನ ಮುನ್ಸೂಚನೆ ಪ್ರಸಾರ!

ಖಾಸಗಿ ಸುದ್ದಿ ವಾಹಿನಿಗಳು ಪಿಒಕೆ ಹವಾಮಾನ ಮುನ್ಸೂಚನೆ ಪ್ರಸಾರ ಮಾಡಲು ಕೇಂದ್ರ ಸರ್ಕಾರ ಕೋರಿದ್ದು ಭಾರತ ತನ್ನ ಸಾರ್ವಭೌಮತೆಯನ್ನು ಸಾಧಿಸಲು ಆರಂಭಿಸಿರುವ ಪೂರ್ವ ಸಿದ್ಧತೆಯ ಒಂದು ಭಾಗವಿದು ಎಂದು ಹೇಳಲಾಗುತ್ತಿದೆ. ಕೇಂದ್ರದ ನಿಲುವಿಗೆ ಸುವರ್ಣ ನ್ಯೂಸ್ - ಕನ್ನಡ ಪ್ರಭ ಬೆಂಬಲ ಸೂಚಿಸಿದ್ದು ಪ್ರತಿದಿನ ಪ್ರೈಮ್‌ ಟೈಮ್‌ ನ್ಯೂಸ್‌ನಲ್ಲಿ ಪಿಒಕೆ ಹವಾಮಾನ ಮುನ್ಸೂಚನೆ ಪ್ರಸಾರ ಮಾಡಲಿದೆ ಸುವರ್ಣ ನ್ಯೂಸ್. 

Video Top Stories