ಪಾಕ್ ಬೆನ್ನಲ್ಲೇ ಭಾರತದಿಂದಲೂ ಯುದ್ಧ ತಾಲೀಮು ಶುರು!
ಕಾಶ್ಮೀರದ ಪಹಲ್ಗಾಮ್ನಲ್ಲಿ ಹಿಂದೂ ಪ್ರವಾಸಿಗರ ನರಮೇಧ ಹಿನ್ನೆಲೆ ಪಾಕಿಸ್ತಾನಕ್ಕೆ ಭಾರತೀಯ ಸೇನೆಯಿಂದ ಪ್ರತೀಕಾರದ ಆತಂಕ ಎದುರಾಗಿದೆ.ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ತುರ್ತು ಸಭೆ ನಡೆಸಿದ್ದು, ಮುಂದಿನ ಪರಿಸ್ಥಿತಿ ಎದುರಿಸುವ ಬಗ್ಗೆ ಚರ್ಚಿಸಲಾಗಿದೆ. ಪಾಕಿಸ್ತಾನದ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್ ಜೊತೆ ತುರ್ತುಸಭೆ ನಡೆಸಿದ್ದು, ಸಭೆಯಲ್ಲಿ ಪಾಕ್ ಪ್ರಧಾನಿ, ಪಾಕ್ ರಕ್ಷಣಾ ಸಚಿವ ಹಾಗೂ ಪಾಕಿಸ್ತಾನದ ಮೂರು ಸೇನಾ ವಿಭಾಗದ ಮುಖ್ಯಸರು ಸಹ ಭಾಗಿಯಾಗಿದ್ದರು. ಭಾರತ ದಾಳಿ ಮಾಡಿದ್ರೆ ಈ ಬಾರಿ ಪಾಕಿಸ್ತಾನ ಸುಮ್ಮನಿರಲ್ಲ ಕಳೆದ ಬಾರಿ ಅಭಿನಂದನ್ ಗೆ ಚಹಾ ನೀಡಿ ಕಳಿಸಿದ್ದೇವು ಎಂದು ಪಾಕ್ ಪಂಜಾಬ್ ಪ್ರಾಂತ್ಯದ ಸಚಿವೆ ಅಜ್ಮಾ ಬೋಕಾರಿ ಹೇಳಿಕೆ ನೀಡಿದ್ದಾರೆ.
ಏನಿದು ಸಿಂಧೂ ನದಿ ಒಪ್ಪಂದ: ಪಾಕ್ ಮೇಲೆ ಬೀರಲಿರುವ ಪರಿಣಾಮವೇನು?
ಪಾಕಿಸ್ತಾನ ಸೇನೆ, ಸರ್ಕಾರ ದಾಳಿ ಮಾಡಿದ್ರೆ ಪಾಠ ಕಲಿಸುತ್ತೆ.ಕಾಶ್ಮೀರದಲ್ಲಿ 7 ಲಕ್ಷ ಸೈನಿಕರು ಇದ್ದರೂ ಈ ದಾಳಿಯಾಗಿದೆ’ ಈ ಬಾರಿ ನಾವು ಸುಮ್ಮನಿರಲ್ಲ ಎಂದು ಸಚಿವೆ ಅಜ್ಮಾ ಬೋಕಾರಿ ಹೇಳಿಕೆ. ಭಾರತ ಈಗಷ್ಟೇ ಭದ್ರತಾ ಸಂಪುಟ ಸಮಿತಿ ಸಭೆ ನಡೆಸಿದೆ. ರಾಜಕೀಯ ಬಿಟ್ಟು ದೇಶ ರಕ್ಷಣೆಗೆ ಒಟ್ಟಾಗಲು ಪಾಕಿಸ್ತಾನದ ಮಾಜಿ ಸಚಿವ ಫಾವದ್ ಚೌಧರಿ ಹುಸೇನ್ ಕರೆ ನೀಡಿದ್ದಾರೆ.