Asianet Suvarna News Asianet Suvarna News

ಪೌರತ್ವ ದಾಖಲೆಗಾಗಿ ಪೂರ್ವಿಕರ ಸಮಾಧಿ ಮುಂದೆ ನಿಂತ ಕಾಂಗ್ರೆಸ್ ನಾಯಕ!

ತಮ್ಮ ಪೌರತ್ವ ದಾಖಲೆ ಎಲ್ಲಿದೆ ಎಂಬುದನ್ನು ತಿಳಿಸುವಂತೆ ಕಾಂಗ್ರೆಸ್ ನಾಯಕರೊಬ್ಬರು ತಮ್ ಮಪೂರ್ವಿಕರ ಸಮಾಧಿ ಬಳಿ ಬಂದು ಮನವಿ ಮಾಡಿದ ವಿಚಿತ್ರ ಘಟನೆ ನಡೆದಿದೆ.

ಲಕ್ನೋ(ಜ.24): ತಮ್ಮ ಪೌರತ್ವ ದಾಖಲೆ ಎಲ್ಲಿದೆ ಎಂಬುದನ್ನು ತಿಳಿಸುವಂತೆ ಕಾಂಗ್ರೆಸ್ ನಾಯಕರೊಬ್ಬರು ತಮ್ ಮಪೂರ್ವಿಕರ ಸಮಾಧಿ ಬಳಿ ಬಂದು ಮನವಿ ಮಾಡಿದ ವಿಚಿತ್ರ ಘಟನೆ ನಡೆದಿದೆ. ಪ್ರಯಾಗ್‌ರಾಜ್‌ನ ಕಾಂಗ್ರೆಸ್ ಮುಖಂಡ ಹಸೀಬ್ ಅಹ್ಮದ್ ಸ್ಮಶಾನಕ್ಕೆ ತೆರಳಿ, ತಮ್ಮ ಪೌರತ್ವ ದಾಖಲೆಗಳು ಎಲ್ಲಿವೆ ಎಂಬುದರ ಕುರಿತು ಮಾಹಿತಿ ನೀಡುವಂತೆ ತಮ್ಮ ಪೂರ್ವಿಕರ ಸಮಾಧಿಗೆ ಮನವಿ ಮಾಡಿದ್ದಾರೆ. ಪೌರತ್ವಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡದಿದ್ದರೆ ತಮ್ಮನ್ನು ವಲಸಿಗರ ಬಂಧನ ಕೇಂದ್ರಕ್ಕೆ ದೂಡುತ್ತಾರೆ.ಹೀಗಾದರೆ ತಮ್ಮ ಪೂರ್ವಿಕರ ಸಮಾಧಿಯನ್ನೂ ವಲಸಿಗರ ಬಂಧನ ಕೇಂದ್ರಕ್ಕೆ ರವಾನಿಸಬೇಕು ಎಂದು ತಾವು ಪ್ರಧಾನಿ ಮೋದಿ ಸರ್ಕಾರವನ್ನು ಕೋರುವುದಾಗಿ ಹಸೀಬ್ ಅಹ್ಮದ್ ಅಲವತ್ತುಕೊಂಡಿದ್ದಾರೆ.

 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಯೋ ನೋಡಿ...

Video Top Stories